ಶನಿವಾರ, ಮಾರ್ಚ್ 23, 2019

ಶೃಂಗೇರಿ ಮಂಗಳಂ

ಶೃಂಗೇರಿ ಮಂಗಳಂ

ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ||

ಕಾಲಭೈರವಗೆ ಕಾಳಿ ದುರ್ಗಿಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ||

ಮಲ್ಲಿಕಾರ್ಜುನಗೆ ಚೆಲುವ ಜನಾರ್ಧನಿಗೆ
ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ||

ವಿದ್ಯಾರಣ್ಯರಿಗೆ ಗುರು ವಿದ್ಯಾಶಂಕರಗೆ
ವಾಗೇಶ್ವರಿಗೂ ವಜ್ರದೇಹಿ ಗಾರುಡಾಂಜನಯ್ಯನಿಗೆ||

ತುಂಗ ಭದ್ರೆಗೆ ಶೃಂಗ ನಿವಾಸಿನಿಗೆ
ಶೃಂಗೇರಿಯಲ್ಲಿ ನೆಲೆಸಿರುವಂತ ಶಾರದಾಂಬೆಗೆ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ