ಭಾನುವಾರ, ಜುಲೈ 3, 2022

108 ಉಪನಿಷತ್ತು

108 ಉಪನಿಷತ್ತು… ನಿಮಗೆಷ್ಟು ಗೊತ್ತು?


ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಇಲ್ಲಿ 108 ಉಪನಿಷತ್ತುಗಳ ಹೆಸರನ್ನೂ ಅವು ಯಾವ ವೇದದ ಭಾಗವಾಗಿದೆ ಎಂಬುದನ್ನೂ ನೀಡಲಾಗಿದೆ…


ವೇದಗಳ ಪ್ರಮುಖ ಭಾಗವಾದ ಉಪನಿಷತ್ತುಗಳನ್ನು ‘ವೇದಾಂತ’ ಎಂದೂ ಕರೆಯುತ್ತಾರೆ. ಉಪ(ಹತ್ತಿರ), ನಿ(ಶ್ರದ್ಧೆಯಿಂದ) ಮತ್ತು ಸತ್(ಕುಳಿತು) = ಉಪನಿಷತ್ ಎಂದಾಗಿದೆ. ಗುರುವಿನ ಹತ್ತಿರದಲ್ಲಿ ಕುಳಿತು ಕೇಳಿಸಿಕೊಳ್ಳುವುದು ಎಂದು ಇದರ ಸರಳ ಅರ್ಥ. ಶಂಕರಾಚಾರ್ಯರು ಕಠೋಪನಿಷತ್ ಮತ್ತು ಬೃಹದಾರಣ್ಯಕೋಪನಿಷತ್‍ಗಳ ಭಾಷ್ಯದಲ್ಲಿ ‘ಉಪನಿಷತ್’ ಎಂದರೆ ಆತ್ಮವಿದ್ಯೆ ಎಂದು ವಿವರಿಸಿದ್ದಾರೆ. ಕೆಲವು ಪದಕೋಶಗಳು “ಗೂಢ ತತ್ವಗಳನ್ನುಳ್ಳ” ಮತ್ತು “ರಹಸ್ಯವಾದ ಸಿದ್ಧಾಂತ” ಎಂಬ ಅರ್ಥಗಳನ್ನು ಕೊಟ್ಟಿವೆ.

ಬಹುತೇಕವಾಗಿ ಉಪನಿಷತ್ತುಗಳ ಸಂಖ್ಯೆ 108 ಎಂದು ಹೇಳಲಾಗುತ್ತದೆ. ಅವುಗಳಲ್ಲಿ; ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ – ಇವು 13 ಪ್ರಧಾನ ಉಪನಿಷತ್ತುಗಳು.

ಪ್ರತಿಯೊಂದು ಉಪನಿಷತ್ತು ಒಂದಲ್ಲ ಒಂದು ವೇದದ ಭಾಗವೇ ಆಗಿದ್ದು, ಯಾವ ಉಪನಿಷತ್ತು ಯಾವ ವೇದದ ಭಾಗವಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ :

1. ಈಶಾವಾಸ್ಯೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

2. ಕೇನೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್

3. ಕಠೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

4. ಪ್ರಶ್ನೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

5. ಮುಂಡಕೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

6. ಮಾಂಡೂಕ್ಯೋಪನಿಷತ್= ಅಥರ್ವವೇದಃ, ಮುಖ್ಯ ಉಪನಿಷತ್

7. ತೈತ್ತಿರೀಯೋಪನಿಷತ್= ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್

8. ಐತರೇಯೋಪನಿಷತ್= ಋಗ್ವೇದಃ, ಮುಖ್ಯ ಉಪನಿಷತ್

9. ಛಾಂದೋಗ್ಯೋಪನಿಷತ್= ಸಾಮವೇದಃ, ಮುಖ್ಯ ಉಪನಿಷತ್

10. ಬೃಹದಾರಣ್ಯಕೋಪನಿಷತ್= ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್

11. ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

12. ಕೈವಲ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

13. ಜಾಬಾಲ ಉಪನಿಷತ್(ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

14. ಶ್ವೇತಾಶ್ವತರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

15. ಹಂಸ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

16. ಆರುಣೇಯ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

17. ಗರ್ಭ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

18. ನಾರಾಯಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

19. ಪರಮಹಂಸ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

20. ಅಮೃತ ಬಿನ್ದೂಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

21. ಅಮೃತ ನಾದೋಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

22. ಅಥರ್ವ ಶಿರೋಪನಿಷತ್= ಅಥರ್ವವೇದಃ, ಶೈವ ಉಪನಿಷತ್

23. ಅಥರ್ವ ಶಿಖೋಪನಿಷತ್=ಅಥರ್ವವೇದಃ, ಶೈವ ಉಪನಿಷತ್

24. ಮೈತ್ರಾಯಣಿ ಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

25. ಕೌಷೀತಕಿ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

26. ಬೃಹಜ್ಜಾಬಾಲ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

27. ನೃಸಿಂಹತಾಪನೀ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

28. ಕಾಲಾಗ್ನಿರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

29. ಮೈತ್ರೇಯಿ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

30. ಸುಬಾಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

31. ಕ್ಷುರಿಕ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

32. ಮಾನ್ತ್ರಿಕ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

33. ಸರ್ವ ಸಾರೋಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

34. ನಿರಾಲಮ್ಬ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

35. ಶುಕ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

36. ವಜ್ರಸೂಚಿ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

37. ತೇಜೋ ಬಿನ್ದು ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

38. ನಾದ ಬಿನ್ದು ಉಪನಿಷತ್= ಋಗ್ವೇದಃ, ಯೋಗ ಉಪನಿಷತ್

39. ಧ್ಯಾನಬಿನ್ದು ಉ ಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

40. ಬ್ರಹ್ಮವಿದ್ಯಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

41. ಯೋಗತತ್ತ್ವ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

42. ಆತ್ಮಬೋಧ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

43. ಪರಿವ್ರಾತ್ ಉಪನಿಷತ್(ನಾರದಪರಿವ್ರಾಜಕ) = ಅಥರ್ವವೇದಃ, ಸಂನ್ಯಾಸ ಉಪನಿಷತ್

44. ತ್ರಿಷಿಖಿ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

45. ಸೀತಾ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

46. ಯೋಗಚೂಡಾಮಣಿ ಉಪನಿಷತ್= ಸಾಮವೇದಃ, ಯೋಗ ಉಪನಿಷತ್

47. ನಿರ್ವಾಣ ಉಪನಿಷತ್= ಋಗ್ವೇದಃ, ಸಂನ್ಯಾಸ ಉಪನಿಷತ್

48. ಮಣ್ಡಲಬ್ರಾಹ್ಮಣ ಉಪನಿಷತ್= ಶುಕ್ಲಯಜುರ್ವೇದಃ, ಯೋಗ ಉಪನಿಷತ್

49. ದಕ್ಷಿಣಾಮೂರ್ತಿ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

50. ಶರಭ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

51. ಸ್ಕನ್ದ ಉಪನಿಷತ್ = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

52. ಮಹಾನಾರಾಯಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

53. ಅದ್ವಯತಾರಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

54. ರಾಮರಹಸ್ಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

55. ರಾಮತಾಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

56. ವಾಸುದೇವ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್

57. ಮುದ್ಗಲ ಉಪನಿಷತ್= ಋಗ್ವೇದಃ, ಸಾಮಾನ್ಯ ಉಪನಿಷತ್

58. ಶಾಣ್ಡಿಲ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

59. ಪೈಂಗಲ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

60. ಭಿಕ್ಷುಕ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

61. ಮಹತ್ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

62. ಶಾರೀರಕ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

63. ಯೋಗಶಿಖಾ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

64. ತುರೀಯಾತೀತ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

65. ಸಂನ್ಯಾಸ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

66. ಪರಮಹಂಸ ಪರಿವ್ರಾಜಕ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್

67. ಅಕ್ಷಮಾಲಿಕ ಉಪನಿಷತ್= ಋಗ್ವೇದಃ, ಶೈವ ಉಪನಿಷತ್

68. ಅವ್ಯಕ್ತ ಉಪನಿಷತ್= ಸಾಮವೇದಃ, ವೈಷ್ಣವ ಉಪನಿಷತ್

69. ಏಕಾಕ್ಷರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

70. ಅನ್ನಪೂರ್ಣ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

71. ಸೂರ್ಯ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್

72. ಅಕ್ಷಿ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

73. ಅಧ್ಯಾತ್ಮಾ ಉಪನಿಷತ್= ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

74. ಕುಣ್ಡಿಕ ಉಪನಿಷತ್= ಸಾಮವೇದಃ, ಸಂನ್ಯಾಸ ಉಪನಿಷತ್

75. ಸಾವಿತ್ರೀ ಉಪನಿಷತ್= ಸಾಮವೇದಃ, ಸಾಮಾನ್ಯ ಉಪನಿಷತ್

76. ಆತ್ಮಾ ಉಪನಿಷತ್= ಅಥರ್ವವೇದಃ, ಸಾಮಾನ್ಯ ಉಪನಿಷತ್

77. ಪಾಶುಪತ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

78. ಪರಬ್ರಹ್ಮ ಉಪನಿಷತ್= ಅಥರ್ವವೇದಃ, ಸಂನ್ಯಾಸ ಉಪನಿಷತ್

79. ಅವಧೂತ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

80. ತ್ರಿಪುರಾತಪನಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

81. ದೇವಿ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

82. ತ್ರಿಪುರ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

83. ಕಠರುದ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

84. ಭಾವನ ಉಪನಿಷತ್= ಅಥರ್ವವೇದಃ, ಶಾಕ್ತ ಉಪನಿಷತ್

85. ರುದ್ರ ಹೃದಯ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

86. ಯೋಗ ಕುಣ್ಡಲಿನಿ ಉಪನಿಷತ್= ಕೃಷ್ಣಯಜುರ್ವೇದಃ, ಯೋಗ ಉಪನಿಷತ್

87. ಭಸ್ಮ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

88. ರುದ್ರಾಕ್ಷ ಉಪನಿಷತ್= ಸಾಮವೇದಃ, ಶೈವ ಉಪನಿಷತ್

89. ಗಣಪತಿ ಉಪನಿಷತ್= ಅಥರ್ವವೇದಃ, ಶೈವ ಉಪನಿಷತ್

90. ದರ್ಶನ ಉಪನಿಷತ್= ಸಾಮವೇದಃ, ಯೋಗ ಉಪನಿಷತ್

91. ತಾರಸಾರ ಉಪನಿಷತ್= ಶುಕ್ಲಯಜುರ್ವೇದಃ, ವೈಷ್ಣವ ಉಪನಿಷತ್

92. ಮಹಾವಾಕ್ಯ ಉಪನಿಷತ್= ಅಥರ್ವವೇದಃ, ಯೋಗ ಉಪನಿಷತ್

93. ಪಞ್ಚ ಬ್ರಹ್ಮ ಉಪನಿಷತ್= ಕೃಷ್ಣಯಜುರ್ವೇದಃ, ಶೈವ ಉಪನಿಷತ್

94. ಪ್ರಾಣಾಗ್ನಿ ಹೋತ್ರ ಉಪನಿಷತ್= ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್

95. ಗೋಪಾಲ ತಪಣಿ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

96. ಕೃಷ್ಣ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

97. ಯಾಜ್ಞವಲ್ಕ್ಯ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

98. ವರಾಹ ಉಪನಿಷತ್= ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್

99. ಶಾತ್ಯಾಯನಿ ಉಪನಿಷತ್= ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್

100. ಹಯಗ್ರೀವ ಉಪನಿಷತ್ = ಅಥರ್ವವೇದಃ, ವೈಷ್ಣವ ಉಪನಿಷತ್

101. ದತ್ತಾತ್ರೇಯ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

102. ಗಾರುಡ ಉಪನಿಷತ್= ಅಥರ್ವವೇದಃ, ವೈಷ್ಣವ ಉಪನಿಷತ್

103. ಕಲಿ ಸಂಚಾರಣ ಉಪನಿಷತ್= ಕೃಷ್ಣಯಜುರ್ವೇದಃ, ವೈಷ್ಣವ ಉಪನಿಷತ್

104. ಜಾಬಾಲ ಉಪನಿಷತ್  = ಸಾಮವೇದಃ, ಶೈವ ಉಪನಿಷತ್

105. ಸೌಭಾಗ್ಯ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

106. ಸರಸ್ವತೀ ರಹಸ್ಯ ಉಪನಿಷತ್= ಕೃಷ್ಣಯಜುರ್ವೇದಃ, ಶಾಕ್ತ ಉಪನಿಷತ್

107. ಬಹ್ವೃಚ ಉಪನಿಷತ್= ಋಗ್ವೇದಃ, ಶಾಕ್ತ ಉಪನಿಷತ್

108. ಮುಕ್ತಿಕ ಉಪನಿಷತ್ = ಶುಕ್ಲಯಜುರ್ವೇದಃ, ಸಾಮಾನ್ಯ ಉಪನಿಷತ್

ಸರ್ವಜನ ಸುಖಿನೋಭವಂತು.,,ಹಾಗೂ ಅಯುತ ಮಹಾಚಂಡೀಯಾಗದ ಕೆಲವು ತುಣುಕು ಗಳು

ಭಾನುವಾರ, ಮೇ 15, 2022

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪ

 ಇಂದು ಹುಣ್ಣಿಮೆ ಪ್ರಯುಕ್ತ ಸತ್ಯ ನಾರಾಯಣ ಕಥನ


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

_______________________________________________


ಶ್ರೀ ಸತ್ಯನಾರಾಯಣ ವ್ರತ ನಮ್ಮ ಜನರ ಬದುಕಿನಲ್ಲಿ ಸಾಮಾನ್ಯವಾಗಿಬಿಟ್ಟಿರುವ ಒಂದು ಪೂಜಾ ವಿಧಾನ. ಅದರ ಭಾಗವಾಗಿರುವ ಕಥೆಯ ಪಾರಾಯಣ ಮಾಡುವುದು ಒಂದು ಪ್ರಮುಖ ಪೂಜಾಂಗ. ಅದನ್ನು ಕಥಾ ರೂಪದ ಬದಲು ಕಾವ್ಯ ರೂಪದಲ್ಲಿ ಹಿಡಿಯುವ ಯತ್ನ ಮಾಡಿದ್ದೇನೆ – ಸಂಕ್ಷಿಪ್ತ ರೂಪದಲ್ಲಿ. ಪ್ರತಿ ನಿತ್ಯ ಅಥವ ತಿಂಗಳು ತಿಂಗಳೂ ಪೂಜಿಸುವಂತವರಿಗೆ ಇದು ಸಮಯದ ದೃಷ್ಟಿಯಿಂದ ಉಪಯೋಗವಾದೀತೆಂಬ ಆಶಯ.

___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಕವನ ರೂಪದಲ್ಲಿ ಈ ಕೆಳಗಿದೆ

_________________________________


ಹಿನ್ನಲೆ

_________________________________


ಭಗವಾನ್ ಕೃಷ್ಣನ ಮಾತೆ ಹೇಳಿಹ ನುಡಿ ಭಗವದ್ಗೀತೆ

ನನ್ನವತಾರಾ ಕಾರಣ ಅರಿತವಗಿಲ್ಲ ಮರುಜನ್ಮ ಚಿಂತೆ

ಭಕ್ತ ಕೋಟಿ ಮಹಾತ್ಮರು ಮಹಿಮೆ ಲೀಲೆ ಹಾಡುವಂತೆ

ಶ್ರದ್ದೆ ಭಕ್ತಿಯಲಿ ವ್ರತಮಾಡೆ, ಮುಕ್ತಿ ಗಳಿಸುತೆ ನಿಶ್ಚಿಂತೆ || ೦೦ ||


ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ

ಕೇಳದಿರೆ ನಷ್ಟ, ಕೇಳೆ ಭಗವನ್ನಾಮಸ್ಮರಣೆಯೆ ಅನುದಿನ

ಮಹಾತ್ಮರಂತೆ ಮುಕ್ತಿ ಮಾರ್ಗಕೆ, ನಡೆಯೇ ದಿವ್ಯ ಪಥದೆ

ಮಾಡೆ ಸಾಕು ನೇಮ ನಿಷ್ಠೆಯಲಿ, ಸರ್ವ ಸಂಪದ ತಪ್ಪದೆ || ೦೦ ||


__________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೧

__________________________________


ಶ್ರೀ ಸತ್ಯನಾರಾಯಣ ಕಥೆಯಿಹ ರೇವಾ ಕಾಂಡ

ಸೂತಪುರಾಣಿಕ ವಿರಚಿತ ಸ್ಕಂದಪುರಾಣದಿಂದ

ನೈಮಿಶಾರಣ್ಯದಿ ಶೌನಕರ ಸಹಸ್ರ ವರ್ಷ ಯಜ್ಞ

ಜತೆ ಋಷಿಗಳಿಗ್ಹೇಳಿ ಪುಣ್ಯಕಥೆ ಲೋಕ ಕಲ್ಯಾಣಾ || ೦೧ ||


ಸಂಸಾರದಿಹಜಗದ ಚಿಂತೆ ತೊರೆದವರಾ ಬಳಗ

ಶೌನಕಾದಿಮುನಿ ಕೇಳೆ ಸೂತ ಪುರಾಣೀಕರನಾಗ

‘ಕಾಮನೆ ಬಯಕೆ ಮನುಕುಲ ಸಹಜವೀ ಪ್ರವೃತ್ತಿ

ಯಾವ ಪೂಜೆ,ವ್ರತ,ತಪ ಕೊಡಬಲ್ಲವು ಸರಿಮುಕ್ತಿ ?’ || ೦೨ ||


ಸಂತಸದೀ ಋಷಿವರ, ಮನುಕುಲದೇಳಿಗೆ ವಿಚಾರ

ಸಂಸಾರಾ ತ್ಯಜಿತರ ನಿಸ್ವಾರ್ಥ ಪ್ರಶ್ನೆ ಜನ ಹಿತಕರ

ದೇವರ್ಷಿ ನಾರದ ನಾರಾಯಣನಿಗೆ ಕೇಳಿದ ಮಾತೆ

ನಾ ಪೇಳುವೆ ನಿಮಗೆ ಕೇಳಿ ಪುನೀತರಾಗಿರಿ ಚರಿತೆ || ೦೩ ||


ತ್ರಿಲೋಕ ಸಂಚಾರಿ ಭೂಲೋಕ ಸುತ್ತಾಟದಿ ಖೇದ

ಮನುಜ ನರಳಿ ಅಜ್ಞಾನ ಜನ್ಮಾಂತರ ಕರ್ಮ ಬಂಧ

ಕೊನೆಯಿರದಾ ದುಃಖ ಪರಿಹಾರ ದಾರಿಯನ್ಹುಡುಕೆ

ಸರ ಸರನೆ ವೈಕುಂಠಕೆ ಶ್ರೀಹರಿಗಿಡುತಲಾ ತೊಡಕೆ || ೦೪ ||


ವೈಕುಂಠದೀ ಶೇಷತಲ್ಪಾಸೀನ ನಾರಾಯಣ ವದನ

ನೋಡುತಲೆ ಮರೆತೆಲ್ಲ ನಾರದ ಮಾಡೇ ಗುಣಗಾನ

ನಸುಸಕ್ಕ ಶ್ರೀಹರಿ, ವಿಷಯವಿತ್ತೆ ತ್ರಿಲೋಕಸಂಚಾರಿ ?

ಮಮ್ಮಲ ಮರುಗೀ ಮನ, ಭೂಜನಕಿಲ್ಲವೆ ರಹದಾರಿ ? || ೦೫ ||


ಆಜನ್ಮ ಬ್ರಹ್ಮಚಾರಿ ಯಾಕಿಲ್ಲ ಪರಿಹಾರಕಿದೆ ದಾರಿ

ಕರ್ಮಕಾಂಡಾವೃತ್ತ ಹುಲುಮಾನವನರಿಯದ ಪರಿ

ಆದರೂ ನಿನ ಮಾತು ಸತ್ಯ, ಲೋಕಕಲ್ಯಾಣಕೆ ನಿತ್ಯ

ಈ ಪೂಜಾರಹಸ್ಯವನರಿಸುವೆ ತೀರಲಿ ಆಸಕ್ತರಗತ್ಯ || ೦೬ ||


ಭೂಲೋಕ ವಾಸಿಗಳಿಗೆ ಶ್ರೀ ಸತ್ಯನಾರಾಯಣ ವ್ರತ

ವರ್ಣಾತೀತ ಉಚ್ಛ ನೀಚ ಭೇಧವಿಲ್ಲದೆ ಸರ್ವ-ಜನತ

ತಾವಾಗುತಾ ಭಕ್ತ-ಪುರೋಹಿತ ನೇರ ಸಂವಹಿಸುತ

ಶ್ರೀಮನ್ನಾರಾಯಣ ಕರುಣೆ ಐಹಿಕಸುಖ ಮೋಕ್ಷದತ್ತ || ೦೭ ||


ಹೇಳಯ್ಯ ಶ್ರೀಹರಿ, ವ್ರತ ನಿಯಮ ಪೂಜಾ ವಿಧಾನ

ಅರಿಯಲಿ ಭಕುತಜನ ಮಾಡಬೇಕೇನೇನು ಪ್ರಧಾನ

ನೇರ ಸರಳ ನಾರದ, ಯಾವ ಸಂಜೆಯಾದರು ಸಿದ್ದ

ಕೆಳೆ ಬಂಧು ಭಾಂದವರೊಡನಿರೆ, ನಂಬಿಕೆ ಭಕ್ತಿ ಶುದ್ಧ || ೦೮ ||


ಮಾಡೆ ಸಾಕು ಪ್ರಸಾದ, ಹಾಲು ಬಾಳೆ ಸಕ್ಕರೆ ತುಪ್ಪ

ಸಮ ಪ್ರಮಾಣದಲಿ ಕಾಯಿಸುತ, ಬೆರೆಸಿದ ಸಮರ್ಪ

ಹಾಡಿ ಹೊಗಳುತ ಭಕ್ತಿಭಜನೆಯಾ ಸುಶ್ರಾವ್ಯದಿರುಳು

ಕಥೆ ಕೇಳಿ ಹಂಚಿ ಪ್ರಸಾದ ಗೌರವದಲಿ ಬೀಳ್ಕೊಡಲು || ೦೯ ||


ಸ್ಥಿತಿ ನಿಯಾಮಕನಿತ್ತ ಪೂಜಾಕ್ರಮ ನಾರದ ಸಂಪ್ರೀತ

ಸರಳ ವ್ರತವದರಲ್ಲಿ ಗಮನ, ಭಕ್ತಿ ಭಜನೆ ಕಥೆಗಳತ್ತ

ಆಲಿಸಲು ಬಯಸಿದ ಯೋಗಿಯಾಸೆಗೆ ನಾರಾಯಣ

ಭಾಗ ವಿಶೇಷಗಳಾಗಿ ಬಿತ್ತರಿಸಿದ ಖಂಡದಲಿಹ ಕಥನ || ೧೦ ||


(ಮುಕ್ತಾಯ : ಅಧ್ಯಾಯ ೦೧)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೨

________________________________________


ಕೇಳಯ್ಯ ನಾರದ, ವೃದ್ಧ ಕಾಶಿ ಬಡ ಬ್ರಾಹ್ಮಣನ ಕಥೆ

ಸಕಲ ಸದ್ಗುಣ ಸಂಪನ್ನ ಐಶ್ವರ್ಯಹೀನ ಭಿಕ್ಷೆಯೆ ಸ್ವತ್ತೆ

ವಿಪ್ರೋತ್ತಮನ ಪರೀಕ್ಷೆಗೆ ವಿಪ್ರಪ್ರಿಯನಾ ಮಾರುವೇಷ

ಭಕ್ತಿ ಪಥದಲಿಹರೆಲ್ಲ ವಿಪ್ರರೆ, ಹರಿಯಾ ಕರುಣಾಪಾಶ || ೧೧ ||


ಬ್ರಾಹ್ಮಣ ವೇಷದಿ ವಿಪ್ರೋತ್ತಮನ ಬಳಿ ಬಂದಾ ದೇವ

ಗೆಳೆಯ ಹೇಳಯ್ಯಾ, ನಿನದೇನಿದೇ ಪರಿತಾಪ ನೋವ

ಕಡುಬಡವ ವಯಸಾಗಿದೆ, ಕಾಡುವ ಬಡತನ ಬವಣೆ

ಬಿಟ್ಟು ಹೋಗದೀ ಶಾಪವ ತೊಲಗಿಸುವ ಹಾದಿ ಕಾಣೆ || ೧೨ ||


ನಕ್ಕ ಪರಮಾತ್ಮ, ಶ್ರೀ ಸತ್ಯನಾರಾಯಣ ವ್ರತವಿಹುದು

ಮಾಡಿ ನೋಡೊಮ್ಮೆ ನಿನ್ನ, ಸಂಕಷ್ಟಗಳೆಲ್ಲಾ ಹರಿವುದು

ಎಂದುಸುರಿದ ಭಗವಂತ ವ್ರತ ಕ್ರಮ ನಿಯಮಾ ಸೂಕ್ತ

ಇರುಳಿನ ನಿದ್ರೆ ಕನಸಲೂ, ಆ ಚಿಂತೆಯಲೆ ಮಲಗುತ || ೧೩ ||


ಬಾರದ ನಿದ್ರೆಯಲುರುಳಾಡುತ ವಿಪ್ರೋತ್ತಮ ನುಡಿದ

ನಾಳಿನ ಭಿಕ್ಷಾಟನೆ ಗಳಿಸಿದ್ದೆಲ್ಲದಿ ವ್ರತ ನಡೆಸಲು ಸಿದ್ದ

ಲೌಕಿಕದೈಶ್ವರ್ಯಕೊಲಿಯದ ದೇವ, ಭಾವಕೆ ಸಂತೃಪ್ತ

ಭಿಕ್ಷೆಯಲೆ ಮಳೆ ಸುರಿಸಿದ, ವ್ರತಕಿಲ್ಲದ ಹಣದಾ ಕುತ್ತ || ೧೪ ||


ಕೊಂಡು ತಂದ ವ್ರತ ದ್ರವ್ಯ, ಸಾಂಗೋಪದ ಪೂಜೆ ಭವ್ಯ

ನೋಡು ನೋಡುತೇ ಭಲಾ, ಬಡತನ ದಾರಿದ್ರ ಮಾಯ

ಸಂತಸಕೆಣೆಯೆಲ್ಲಿ ಭಾಗ್ಯಕೆ, ಪ್ರತಿ ತಿಂಗಳು ಮಾಡಿ ವ್ರತ

ಪರಮಸುಖ ಸಂತಸ ಜತೆಗೆ, ಮೋಕ್ಷ ಪಡೆದೆ ಸುಖಾಂತ || ೧೫ ||


ಆಲಿಸುತ ಧ್ಯಾನನಿರತ ಶೌನಕಾದಿ ಮುನಿಗಣ ಪುನೀತ

ಕೇಳಲು ಸೂತಪುರಾಣಿಕರ, ಜಗದಿ ಪಸರಿಸಿತ್ಹೇಗೀವ್ರತ

ಪರಿಪಾಲಿಸಿದವರಿಗೆಲ್ಲಾ, ಸಿಕ್ಕಿತೇನೇನು ಭಾಗ್ಯ ಸುಕೃತ

ಸೂತರಿತ್ತರು ವಿವರ, ವಿಪ್ರನಾ ಕಥೆಯಲೆ ಉತ್ತರಿಸುತ್ತ || ೧೬ ||


ವ್ರತನಿರತ ಬ್ರಾಹ್ಮಣ ಗೃಹಕದೊಂದು ದಿನ ಕಟ್ಟಿಗೆಯವ

ಪೂಜಾ ವೈಭವ ಸಂಭ್ರಮಕೆ, ಚಕಿತನಾಗಿ ಕೇಳಿದ ಜಾವ

ಏನೀ ಪೂಜಾ ವ್ರತ ಸ್ವಾಮಿ, ಯಾವುದೀ ಹಣ್ಣೂ ಹಂಫಲ ?

ಮಾಡಿಹೇ ಸತ್ಯನಾರಾಯಣ ವ್ರತ, ಫಲಿತವೀ ಸಂಪತ್ತೆಲ್ಲ || ೧೭ ||


ಯಾರೂ ಮಾಡಬಹುದಾದ ಪೂಜೆ, ಸರಳ ದೈವಿಕ ಶ್ರದ್ಧೆ

ಮನದಾಶೆ ಕಾಮನೆಯೆಲ್ಲ, ಪೂರೈಸೆ ಭಗವಂತನ ಮದ್ದೆ

ನನ್ನ ಬಡತನವೆಲ್ಲ ಮಾಯ, ಲಭಿಸಿ ವ್ರತದಿಂದಾದಾಯ

ಸೇವಿಸು ನೀ ಪ್ರಸಾದ, ಫಲ ಸಿಗಲಿ ನಿನಗು ಪುಣ್ಯಕಾರ್ಯ || ೧೮ ||


ಮರ ಕಡಿವಾ ಮನದೊಳಗೆ, ಕಡಿಯುತ ಚಿಂತನೆಗೆ ಸೌದೆ

ನಾಳಿನ ಸಂಪಾದನೆಯಲ್ಲೆ ನಾ ಮಾಡಿಬಿಡುವೆ ವ್ರತ ಶ್ರದ್ದೆ

ಎಂದವನಾ ಕಟ್ಟಿಗೆ ವ್ಯಾಪಾರವಂದಾಯ್ತು ಭರ ಪೂರದಲಿ

ವ್ರತಪೂಜಾ ಸಲಕರಣೆಯೆಲ್ಲ, ತರಲು ಬಂದ ಲಾಭದಲಿ || ೧೯ ||


ಬಂಧು-ಬಳಗ ನೆಂಟರಿಷ್ಟರೆಲ್ಲರ, ಆಹ್ವಾನಿಸಿ ಪೂಜಾವ್ರತ

ಪೂಜಿಸೆ ಸಾಧಾರಣ ಸೌದೆ ಕಡಿವವಗು, ತಾ ಒಲಿಯುತ

ಕರುಣಿಸಿದನು ಐಶ್ವರ್ಯ, ಸಂಪತ್ಭೋಗದ ಸಿರಿ ಸುರಿಮಳೆ

ಭಕ್ತಿ ವ್ರತನಿರತನಿಗನುಗ್ರಹಿಸಿ,ಸತ್ಯ ಲೋಕಕೊಯ್ದ ಕಹಳೆ || ೨೦ ||


(ಮುಕ್ತಾಯ : ಅಧ್ಯಾಯ ೦೨)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


___________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೩

___________________________________


ಮುಂದುವರೆಸುತ ಸೂತರು ರಾಜನ ಕಥೆ ಉಲ್ಕಮುಖ

ಸತ್ಯವ್ರತ ಪ್ರಜ್ಞಾವಂತ ದಯಾಳು ದೀನದಲಿತ ಸೇವಕ

ಅಸೀಮ ಭಕ್ತ ದಿನಂಪ್ರತಿ ಗುಡಿ ಗೋಪುರ ದೇವಾಲಯ

ಭಗವಂತನಾರಾಧನೆಗೆ ಬಡವಗೆ ದಾನ ಧರ್ಮ ಕಾರ್ಯ || ೨೧ ||


ಅಂತೊಂದು ದಿನ ನದಿ ತೀರದಿ ಸತ್ಯನಾರಾಯಣವ್ರತ

ಮಾಡಿರುವ ಹೊತ್ತಲೆ ಬರಲೊಬ್ಬ ವರ್ತಕ ಶ್ರೇಷ್ಠ ಚಕಿತ

ಕೇಳಲೇನಿದು ಪೂಜಾವ್ರತ, ಏನಿಹುದದು ಪೂಜಾಫಲ

ವಿನಮ್ರದಲೆ ಪೇಳಲು ರಾಜ, ವ್ರತ ನಿಯಮದ ಸರಳ || ೨೨ ||


ನಾ ನಡೆಸಿಹನಯ್ಯಾ ಈ ವ್ರತ ಸಿರಿ ಸಂಪದ ಭಾಗ್ಯಕೆ

ನಿನ್ನ ಹಡಗಂತೆ ಸಮೃದ್ಧ ರಾಜ್ಯವಾಗಿರಲೆಂಬ ಬಯಕೆ

ಶ್ರಿಮನ್ನಾರಾಯಣನಾ ವಿಷ್ಣುವನು ಓಲೈಸುವ ವಿಧಾನ

ಬಯಸಿದ್ದೆಲವ ಒಲಿದರೆ, ಕರುಣಿಸಿ ಮಾಡೇ ಪ್ರಧಾನ || ೨೩ ||


ವರ್ತಕ ಶ್ರೇಷ್ಠಿ ಕುತೂಹಲ, ಕೇಳಲೆ ಪೂಜಾ ವಿಧಾನ

ಸಿರಿಸಂಪದವಿದ್ದೇನು ಫಲ, ಮಕ್ಕಳಿಲ್ಲದೆ ಕೊರಗಿಹನ

ದಯಮಾಡಿ ತಿಳಿಸಯ್ಯಾ ರಾಜ, ಬೇಕಾದ್ದೆಲ್ಲಾ ವಿವರ

ರಾಜನಿತ್ತ ಹರ್ಷದಲೆ, ಪಡೆದು ವರ್ತಕ ಸೇರಿದನೂರ || ೨೪ ||


ಮನೆಯೊಡತಿ ಲೀಲಾವತಿಗ್ಹೇಳುತ ವ್ರತಪೂಜಾಸಾರ

ಮಕ್ಕಳಾಗಲಿ ಮಾಡುವ ಸತ್ಯನಾರಾಯಣವ್ರತ ಪೂರ

ಅನತಿ ಕಾಲದೆ ಗರ್ಭಿಣಿ ಲೀಲಾವತಿ ಹೆತ್ತು ಕಲಾವತಿ

ಪ್ರಾಯಕೆ ಬಂದರೂ ಪೂಜೆಯ ಮರೆತು ಬಿಟ್ಟ ಸಂಗತಿ || ೨೫ ||


ಚಿಂತೇ ಬಿಡು ಲೀಲಾವತಿ, ವ್ರತ ಮಾಡಿ ಮದುವೆ ಜತೆ

ತೀರಿಸಿ ಬಿಡುವ ಹರಕೇ ಬಾಕಿ, ಎಂದವನಾ ಕಕ್ಕುಲತೆ

ಮದುವೆ ನಡೆದೇ ಹೋಯ್ತೆ, ವ್ರತವೇಕೊ ಮರೆತೋಯ್ತೆ

ಭಕ್ತಪ್ರಿಯ ನಾರಾಯಣನೆ, ನೆನಪಿಸಲು ಬರಬೇಕಾಯ್ತೆ || ೨೬ ||


ರತ್ನಸಾರ ಪಟ್ಟಣದಲಿ ರಾಜ್ಯವನಾಳುತ ಚಂದ್ರಕೇತು

ಅಳಿಯನ ಜತೆ ವರ್ತಕ ವ್ಯಾಪಾರಕೆ ಬಂದಿಳಿದಹೊತ್ತು

ಅರಮನೆಯಲಿ ಕದ್ದ ದ್ರವ್ಯ ಹೊತ್ತೋಡಿದ ಕಳ್ಳರ ಬೆನ್ನು

ಹಿಡಿದೋಡಿದ ರಾಜಭಟರ ತಪ್ಪಿಸಿಕೊಳ್ಳಲೆಸೆದ ಹೊನ್ನು || ೨೭ ||


ಮರದ ನೆರಳಡಿ ವಿಶ್ರಮಿಸಿರೆ ವರ್ತಕನೊಡನೆ ಅಳಿಯ

ಬಿತ್ತಲ್ಲ ಕದ್ದೆಸೆದ ಗಂಟು, ಪಕ್ಕದಲೆ ಗ್ರಹಚಾರ ಸಮಯ

ಪರದೇಶಿಗಳ ಕಥೆ ಪ್ರವರ, ಕೇಳುವವರಲ್ಲ ರಾಜಭಟರು

ಕದ್ದ ಮಾಲಿನ ಜತೆಗೆ, ಹೊತ್ತೊಯ್ದು ಸೆರೆಗ್ಹಾಕಿ ಮರೆತರು || ೨೮ ||


ನೆನಸಿಕೊಂಡ ವ್ಯಾಪಾರಿ, ವ್ರತ ಮರೆತೆ ಕಾಡಿಹ ಶ್ರೀಹರಿ

ಕಳ್ಳತನದಿ ಬೀದಿಪಾಲು, ಲೀಲಾವತಿ ಕಲಾವತಿ ಕಮರಿ

ಭಿಕ್ಷೆಯಲಲೆಯುತ ಕಲಾವತಿ ಕಂಡು ನಾರಾಯಣ ವ್ರತ

ತಾಯಿಗ್ಹೇಳಲೆ ವೃತ್ತಾಂತ ಮರೆತಿದ್ದ ವ್ರತದ ನೆನಪಾಯ್ತ || ೨೯ ||


ಮರುದಿನವೆ ಕರೆಯುತ ಬಂಧು ಬಳಗದ ಜತೆಯೆ ವ್ರತ

ಗಲ್ಲ ಬಡಿಯುತ ಕ್ಷಮೆ ಕೇಳುತೆ, ರಾಜನಿಗೆ ಕನಸು ಬಿತ್ತ

ತಪ್ಪರಿವಾಗಿ ವಿಚಾರಿಸೆ, ವರ್ತಕನ ಬಿಡುಗಡೆಗೊಳಿಸುತೆ

ತಪ್ಪಿನ ಬದಲಿಗಪಾರ, ಸಂಪತ್ತ ಹೊರೆ ಹೊರಿಸಿ ಘನತೆ || ೩೦ ||


(ಮುಕ್ತಾಯ : ಅಧ್ಯಾಯ ೦೩)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೪

________________________________________


ಮುಂದೇನಾಯ್ತೆನಲೆ ಮುನಿಜನ, ಸೂತರೇಳುತ ಕಥನ

ಬಿಡುಗಡೆಯಾದ ಸಂತಸ, ಹಡಗನೇರಿದರಿಬ್ಬರೆ ಜತನ

ಊರ ಬಾಗಿಲಿನ್ಹೊರಗೆ, ಬಂದು ತಲುಪಿದವರ ಪರೀಕ್ಷೆಗೆ

ಬಂದನೆ ಸನ್ಯಾಸಿ ರೂಪದೆ, ಏನಿದೆ ಕೇಳಲ್ಹಡಗಿನೊಳಗೆ || ೩೧ ||


ಬಿಟ್ಟರೂ ಬಿಡದ ಮಾಯೆ, ವರ್ತಕನನು ಬಿಡದ ನೋವೆ

ಅನೃತವನಾಡಿಸಿತು ನಾಲಿಗೆ, ತರಗೆಲೆ ತುಂಬಿದ ನಾವೆ

ನಸುನಕ್ಕ ಭಗವಂತ, ತಥಾಸ್ತು ಎನುತ ನಡೆದ ಸಮಯ

ಎದೆಯೊಡೆದೆ ಪ್ರಜ್ಞಾಶೂನ್ಯ, ವರ್ತಕನಿಗರಿವಾಗಿ ನ್ಯಾಯ || ೩೨ ||


ಓಡಿದ ನಾಗಾಲೋಟ ಸನ್ಯಾಸಿಯ ಊರೆಲ್ಲ ಹುಡುಕುತ

ಕಾಲಿಗೆ ಬಿದ್ದವನೆ, ಕ್ಷಮಿಸಯ್ಯಾ ನನ್ನ ಮೂಢತನ ಧೂರ್ತ

ಕರುಣಾಮಯ ಶ್ರೀಹರಿ, ಕ್ಷಮಿಸಿದನು ಕನಿಕರವಾ ತೋರಿ

ನಿರಾಳದೆ ಮರಳಿದ ವರ್ತಕ, ಸತಿಗೆ ಕಳಿಸೆ ಸುದ್ದಿಸವಾರಿ || ೩೩ |


ಶ್ರೀಸತ್ಯನಾರಾಯಣವ್ರತ ನಿರತೆ, ಕಾಯದ ಸಹನೆ ಕುತ್ತೆ

ಪೂಜೆ ಮುಗಿಸಲು ಕಲಾವತಿಗ್ಹೇಳಿ, ಓಡುತ ಪತಿಗರಸುತೆ

ಗಂಡನನು ಕಾಣುವ ತವಕ, ಅವಸರದಲಿ ಮುಗಿಸಿ ಪೂಜೆ

ಸ್ವೀಕರಿಸದೆ ಪೂಜಾ ಪ್ರಸಾದ, ಓಡಿದಳೆ ಕಲಾವತಿ ಸಹಜೆ || ೩೪ ||


ಬಂದು ನೋಡಿದರಲ್ಲಿ, ಕಾಣದ ನಾವೆ ಪತಿಯ ಸುಳಿವೆಲ್ಲಿ

ಹಾಕಿದ ಲಂಗರೆ ನಾಪತ್ತೆ ಮುಳುಗಿತ್ತೆ ಪತಿಯ ಜತೆಯಲ್ಲಿ

ಬಿಕ್ಕಿ ಆತ್ಮಾಹುತಿಗೆಣೆ ಕಲಾವತಿ, ವರ್ತಕ ಚಿಂತಿತ ಪೂರ್ತಿ

ನಡೆದಿರಬೇಕೇನೊ ತಪ್ಪು, ಮನ ಹುಡುಕಿರೆ ಕಾರಣ ಸರತಿ || ೩೫ ||


ಚಿಂತೆಯ ನಡುವಲೆ ಅಲ್ಲೆ, ವ್ರತ ಮಾಡಲ್ಹೊರಟಾ ವರ್ತಕ

ಅರಿತೊ ಅರಿಯದೆ ಮಾಡಿದ, ತಪ್ಪೆಲ್ಲ ಕ್ಷಮಿಸು ಪ್ರವರ್ತಕ

ವಿಧ ವಿಧದಲಿ ಪ್ರಾರ್ಥನೆ, ಮೊರೆಯಿಡುತಾ ಆರಾಧಿಸಲು

ಭಗವಂತನ ಕರುಣೆಗೆ ಮತ್ತೆ, ಅರಿವಾಯ್ತು ತಪ್ಪಿನ ತಿರುಳು || ೩೬ ||


ಸ್ವೀಕರಿಸಲಿ ಪ್ರಸಾದ ಮೊದಲು, ಪರಿಹಾರವಾಗಿ ದೋಷ

ಸರಿಯಾಗುವುದೆಲ್ಲ ಮತ್ತೆ, ನಾರಾಯಣನೆನಲು ಸುಹರ್ಷ

ವ್ರತ ಪೂಜಾಗೃಹಕೆ ಓಡಿದಳೆ, ಕಲಾವತಿ ಭರದಿ ಪ್ರಸಾದ

ಸ್ವೀಕರಿಸುತ ಪೊಡಮಟ್ಟಲು, ಶ್ರೀಹರಿ ಪರಿಹರಿಸಿ ವಿಷಾದ || ೩೭ ||


ನಿಜ ಭಕ್ತಿಯಲಿ ಎರಗಿ ಸುಕೋಮಲೆ, ಶ್ರೀಹರಿ ಕೃಪೆಮಾಲೆ

ಕಳುವಾದ ಪತಿಯು ಹಿಂದಿರುಗಿರಲೆ, ನಾರಾಯಣ ಲೀಲೆ

ಸಂತಸ ಭರದಲಿ ವೃದ್ಧಿ, ಭಗವಂತನ ಮೇಲಣ ಭಯಭಕ್ತಿ

ಸುಖಸಂತೋಷವ ಹೊಂದೆ, ಜೀವನವಿಡಿ ವ್ರತಮಾಡಿ ಶಕ್ತಿ || ೩೮ ||


ಆಂತು ಮಂಗಳಕರವಾಗೆ, ಲೀಲಾವತಿ ಕಲಾವತಿ ಪ್ರವರ

ಅಲಕ್ಷಿಸದೆ ಮಾಡೆ ಶ್ರೀಸತ್ಯನಾರಾಯಣ ವ್ರತ ಪರಿಹಾರ

ಕಷ್ಟ ನಷ್ಟಗಳೆಲ್ಲಾ ಕರಗಿ, ಸುಖಸಂತೋಷ ಸಮೃದ್ಧಿಯಲೆ

ಪಡೆಯಲು ಕೈವಲ್ಯ ಮುಕ್ತಿ, ಐಹಿಕ ಜೀವನ ಕಳೆದಮೇಲೆ || ೩೯ ||


(ಮುಕ್ತಾಯ: ಅಧ್ಯಾಯ – ೦೪)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ


________________________________________

ಶ್ರೀ ಸತ್ಯನಾರಾಯಣ ಪೂಜೆಯ ಕಥನ – ಅಧ್ಯಾಯ ೦೫

________________________________________


ನೇಮಿಷಾರಣ್ಯ ಕಾನನದಿ ಸೂತರು ಮುಂದುವರೆಸುತಲಿ

ಶೌನಕಾದಿ ಮುನಿಗಳಿಗೆ ಅರುಹೆ, ಐದನೆ ಅಧ್ಯಾಯದಲಿ

ಬಲು ಮುಖ್ಯವೀ ಭಾಗದ ಕಥೆ, ನಾವಾಗಬಾರದು ಅಂತೆ

ಕೇಳಿ ಧನ್ಯರಾಗುವ ಸರದಿ, ಶ್ರೀಮನ್ನಾರಾಯಣ ಭಕ್ತಿ ಕಥೆ || ೪೦ ||


ಪೂರ್ವದಲಿ ರಾಜ್ಯವಾಳುತ, ಅಂಗಧ್ವಜನೆಂಬೊಬ್ಬ ರಾಜ

ಸರ್ವೋತ್ತಮ, ಸತ್ಯ ನಿಷ್ಠುರ ಪರಿಪಾಲಿಸುತಿರಲೆ ಸಹಜ

ಯಾರನು ಬಿಟ್ಟೀತೊ ಮಾಯೆ, ಸತ್ಯನಾರಾಯಣ ವ್ರತದ

ಅಲಕ್ಷಿಸಲೊಮ್ಮೆ ಪ್ರಸಾದ, ಸಂಕಷ್ಟಗಳ ಬಾಗಿಲಾ ತೆರೆದ || ೪೧ ||


ಬೇಟೆಯಾಡುತ ಕಾಡಿನಲಿ, ವನ್ಯಮೃಗಗಳ ಬೆನ್ನಟ್ಟುತಲಿ

ದಣಿದ ರಾಜ ವಿಶ್ರಮಿಸೆ, ಕೂಡೆ ಮರದ ನೆರಳೊಂದರಲಿ

ಅನತಿ ದೂರದಲೆ ಆಡಿಕೊಂಡಿದ್ದ ಬಾಲರ ಕಲರವದಲಿ

ಆಡಿದ್ದರಾಟ ಸತ್ಯನಾರಾಯಣ ಪೂಜೆ ಮಾಡೆ ಆಟದಲಿ || ೪೨ ||


ತುಂಡು ರೊಟ್ಟಿ ಹೊರತು, ಬೇರೇನಿಲ್ಲ ಕಿರಿಯರ ಬಳಗ

ಆರಿಸಿಕೊಂಡರು ತಮ್ಮಲೊಬ್ಬನಿಗಿತ್ತೆ ಪುರೋಹಿತ ಜಾಗ

ದನ ಕಾಯುವವರ ಬುತ್ತಿ, ಆಟದಲೆ ಸಹಜ ಬಾಲಭಕ್ತಿ

ತೋಚಿದಂತೆ ಮಾಡಿರಲು ಪೂಜೆ, ಸತ್ಯನಾರಾಯಣಶಕ್ತಿ || ೪೩ ||


ಅಟದ ಪೂಜೆಯಲಿ ನೈವೇದ್ಯ, ಬುತ್ತಿಯನೆ ಅರ್ಪಿಸಿದ

ದನಗಾಹಿ ಬಾಲರು ರಾಜನಿಗರ್ಪಿಸಲು ವ್ರತ ಪ್ರಸಾದ

ಹಮ್ಮು, ಬಿಗುಮಾನ, ಗರ್ವ ಕಾಡಿರಲು ಮಲಿನಾ ಮನ

ಮುಟ್ಟದೆ ನಡೆದನೆ ಪ್ರಸಾದ, ಆಗದಿಹುದೇ ಪ್ರತಿಫಲನ ?|| ೪೪ ||


ನೋಡು ನೋಡುತೆ ಅಂಗಧ್ವಜ, ಕಳುವಾಗಿ ಹೋಯ್ತೆಲ್ಲ

ಕಳೆದುಕೊಂಡ ಐಶ್ವರ್ಯದ ಜತೆಗೆ, ನೂರು ಮಕ್ಕಳಿನ್ನಿಲ್ಲ

ಆಲೋಚಿಸುತ ಸಜ್ಜನ ರಾಜ, ಅರಿತ ಪ್ರಸಾದದ ಶಾಪ

ನಿರ್ಲಕ್ಷಿಸಿದ ಪಾಪವೆ, ಕಾಡಿದೆ ಈ ತರದಲಿ ನಿಜರೂಪ || ೪೫ ||


ತಡಮಾಡದೆ ಅಂಗಧ್ವಜ, ಹೊರಟ ದನಗಾಹಿ ತಾಣಕೆ

ಸೇರಿಸಲದೆ ಬಾಲರ, ಮಾಡಿ ವ್ರತ ಶ್ರದ್ದಾ ಭಕ್ತಿ ಬೆಳಕೆ

ಮನ್ನಿಸಿದ ಶ್ರೀಹರಿ, ಮತ್ತೆ ಕರುಣಿಸುತ ಕಳೆದ ಸಂಪತ್ತು

ಇನ್ನಿಲ್ಲವಾದ ಬಂಧುಗಳೆಲ್ಲಾ ಮತ್ತೆ ಕೈ ಸೇರಿದ ಹೊತ್ತು || ೪೬ ||


ಸೂತರೆಂದರು ಕಥೆ ಮುಗಿಸುತ, ಕಲಿಯುಗಕಿದು ಸೂಕ್ತ

ವಿಶೇಷ ಶಕ್ತಿಯಿಹ ಈ ವ್ರತ, ಕರುಣಿಸಬಲ್ಲ ಅಪರಿಮಿತ

ಪವಿತ್ರ ಪುನೀತ ದೇವರ ದೇವನ, ಹೆಸರಾಗಿಹ ಅನಂತ

ಈಶ್ವರ, ಸತ್ಯದೇವ, ನಾರಾಯಣಾದಿ ರೂಪದ ಅದ್ವೈತ || ೪೭ ||


ಅವತರಿಸಿಹ ಹಲವವತಾರ, ಬಗೆ ರೂಪಗಳಲಿ ಒಬ್ಬನೆ

ಈ ಕಥೆ ಕೇಳಿ ಓದಿದೆಲ್ಲರಿಗು, ಸನ್ಮಂಗಳವ ತೋರುವನೆ

ಪರಿಹರಿಸುವನವರೆಲ್ಲರ ದುಃಖ ಸಂಕಷ್ಟಗಳ ಸರಮಾಲೆ

ಶ್ರೀ ಸತ್ಯನಾರಾಯಣ ವ್ರತದೆ, ಇಹಪರ ಸುಖ ಮುಟ್ಟಲೆ || ೪೮ ||


(ಮುಕ್ತಾಯ: ಅಧ್ಯಾಯ – ೦೫)


ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

ಓಂ ಶ್ರೀ ಸತ್ಯನಾರಾಯಣಾಯ ನಮಃ

___________________

ಕಾವ್ಯರೂಪ : ನಾಗೇಶ ಮೈಸೂರು


▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು

         ಸರ್ವಜನಾಃ ಸುಖಿನೋಭವತು 

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

ಶನಿವಾರ, ಮಾರ್ಚ್ 23, 2019

ಶೃಂಗೇರಿ ಮಂಗಳಂ

ಶೃಂಗೇರಿ ಮಂಗಳಂ

ಮಂಗಳಂ ಗುರು ಶ್ರೀ ಚಂದ್ರಮೌಳೇಶ್ವರಗೆ
ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ||

ಕಾಲಭೈರವಗೆ ಕಾಳಿ ದುರ್ಗಿಗೆ
ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ||

ಮಲ್ಲಿಕಾರ್ಜುನಗೆ ಚೆಲುವ ಜನಾರ್ಧನಿಗೆ
ಅಂಬಭವಾನಿ ಕಂಬದ ಗಣಪತಿ ಚಂಡಿ ಚಾಮುಂಡಿಗೆ||

ವಿದ್ಯಾರಣ್ಯರಿಗೆ ಗುರು ವಿದ್ಯಾಶಂಕರಗೆ
ವಾಗೇಶ್ವರಿಗೂ ವಜ್ರದೇಹಿ ಗಾರುಡಾಂಜನಯ್ಯನಿಗೆ||

ತುಂಗ ಭದ್ರೆಗೆ ಶೃಂಗ ನಿವಾಸಿನಿಗೆ
ಶೃಂಗೇರಿಯಲ್ಲಿ ನೆಲೆಸಿರುವಂತ ಶಾರದಾಂಬೆಗೆ||

ಶ್ರೀ ಹಯಗ್ರೀವಸ್ತವಮ್

ಶ್ರೀ ಹಯಗ್ರೀವಸ್ತವಮ್...
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ || ೧ ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ |
ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾಪ್ರವಾಹವತ್ || ೨ ||

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ಸ ವೈಕುಂಠಕವಾಟೋದ್ಘಾಟನಕ್ಷಮಃ || ೩ ||

ಶ್ಲೋಕತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಮ್ |
ವಾದಿರಾಜಯತಿಪ್ರೋಕ್ತಂ ಪಠತಾಂ ಸಂಪದಾಂ ಪದಮ್ || ೪ ||

|| ಇತಿ ಶ್ರೀಮದ್ವಾದಿರಾಜಪೂಜ್ಯಚರಣವಿರಚಿತಂ 
ಹಯಗ್ರೀವಸಂಪದಾಸ್ತೋತ್ರಂ ಸಂಪೂರ್ಣಮ್ ||

ಗುರುವಾರ, ಸೆಪ್ಟೆಂಬರ್ 20, 2018


ನನ್ನ ಕಣ್ಣಿಗೆ ಕೃಷ್ಣನು ಗೋಚರನಾಗಲಿ (ಶ್ರೀಶಂಕರಾಚಾರ್ಯರ ಕೃತಿಸಂಗ್ರಹ)


ಶ್ರಿಯಾಶ್ಲಿಷ್ಟೋ ವಿಷ್ಣುಃ ಸ್ಥಿರಚರಗುರುರ್ವೇದವಿಷಯೋ
ಧಿಯಾಂ ಸಾಕ್ಷೀ ಶುದ್ಧೋ ಹರಿರಸುರಹನ್ತಾಬ್ಜನಯನಃ |
ಗದೀ ಶಙ್ಖೇ ಚಕ್ರೀ ವಿಮಲವನಮಾಲೀ ಸ್ಥಿರರುಚಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ನೋಕ್ಷಿವಿಷಯಃ ||1||

ಲಕ್ಷ್ಮಿಯಿಂದಾಲಿಂಗತನಾಗಿರುವ ವಿಷ್ಣುವೂ, ಸ್ಥಾವರಜಂಗಮಪ್ರಾಣಿಗಳಿಗೆಲ್ಲ ಗುರುವೂ, ವೇದಗಳು ತಿಳಿಸಿಕೊಡತಕ್ಕ ಪರಮಾರ್ಥವಿಷಯವೂ, ಬುದ್ಧಿವೃತ್ತಿಗಳಿಗೆ ಸಾಕ್ಷಿಯಾಗಿರುವ ಶುದ್ಧಚೈತನ್ಯಸ್ವರೂಪನೂ, ಅಸುರರನ್ನು ಕೊಲೆಮಾಡುವ ಹರಿಯೂ, ಕಮಲನೇತ್ರನೂ, ಗದೆ, ಶಂಖ, ಚಕ್ರ, ನಿರ್ಮಲವಾದ ವನಮಾಲೆ ಇವುಗಳನ್ನು ಧರಿಸಿರುವವನೂ ನಿತ್ಯವಾದ ಕಾಂತಿಯುಳ್ಳವನೂ ಶರಣುಹೋಗುವದಕ್ಕೆ ತಕ್ಕವನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಯತಃ ಸರ್ವಂ ಜಾತಂ ವಿಯದನಿಲಮುಖ್ಯಂ ಜಗದಿದಂ
ಸ್ಥಿತೌ ನಿಃಶೇಷಂ ಯೋವತಿ ನಿಜಸುಖಾಂಶೇನ ಮಧುಹಾ |
ಲಯೇ ಸರ್ವಂ ಸ್ವಸ್ಮಿನ್ ಹರತಿ ಕಲಯಾ ಯಸ್ತು ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||2||

ಆಕಾಶ, ವಾಯು - ಮುಂತಾದ ಈ ಜಗತ್ತೆಲ್ಲವೂ ಯಾವಾತನಿಂದ ಹುಟ್ಟಿರುವದೋ, ಸ್ಥಿತಿಕಾಲದಲ್ಲಿ ಇದೆಲ್ಲವನ್ನೂ ತನ್ನ ಆನಂದದ ಅಂಶದಿಂದ ಯಾವಾತನು ಕಾಪಾಡುತ್ತಿರುವನೋ, ಯಾವ ಮಧುಸೂದನನು ಪ್ರಲಯಕಾಲದಲ್ಲಿ ತನ್ನ ಕಲಾಮಾತ್ರದಿಂದ ಎಲ್ಲವನ್ನೂ ತನ್ನಲ್ಲಿಯೇ ಅಡಗಿಸಿಕೊಳ್ಳುವನೋ, ಆ ಸರ್ವವ್ಯಾಪಕನೂ ಶರಣುಹೋಗುವದಕ್ಕೆ ತಕ್ಕವನ್ನೂ, ಲೋಕಗಳೊಡೆಯನೂ ಆದ ಶ್ರೀ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಅಸೂನಾಯಮ್ಯಾದೌ ಯಮನಿಯಮಮುಖ್ಯೈಃ ಸುಕರಣೈ-
ರ್ನಿರುಧ್ಯೇದಂ ಚಿತ್ತಂ ಪೃದಿ ವಿಲಯಮಾನೀಯ ಸಕಲಮ್ |
ಯಮಿಡ್ಯಂ ಪಶ್ಯನ್ತಿ ಪ್ರವರಮತಯೋ ಮಾಯಿನಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||3||

ಶ್ರೇಷ್ಠಮತಿಗಳಾದವರು ಪ್ರಾಣಾಯಾಮವನ್ನು ಮಾಡಿಕೊಂಡು ಯಮ, ನಿಯಮ ಮುಂತಾದ ಉತ್ತಮ ಸಾಧನಗಳಿಂದ ಈ ಚಿತ್ತವನ್ನು ನಿರೋಧಮಾಡಿಕೊಂಡು ಸಕಲವನ್ನೂ ಹೃದಯದಲ್ಲಿ ಲಯಮಾಡಿಕೊಂಡು ಸ್ತುತ್ಯನೂ ಮಾಯಾವಿಯೂ ಆದ ಯಾವಾತನನ್ನು ಕಾಣುವರೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಶ್ರೀಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಪೃಥಿವ್ಯಾಂ ತಿಷ್ಮನ್ಯೋ ಯಮಯತಿ ಮಹೀಂ ವೇದ ನ ಧರಾ
ಯಮಿತ್ಯಾದೌ ವೇದೋ ವದತಿ ಜಗತಾಮೀಶಮಮಲಮ್ |
ನಿಯನ್ತಾರಂ ಧ್ಯೇಯಂ ಮುನಿಸುರನೃಣಾಂ ಮೋಕ್ಷದಮಸೌ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||4||

ಯಾವಾತನು ಪೃಥ್ವಿಯಲ್ಲಿದ್ದುಕೊಂಡು ಪೃಥ್ವಿಯನ್ನು ವಶದಲ್ಲಿಟ್ಟುಕೊಂಡಿರುವನೋ ಆದರೆ ಯಾವಾತನನ್ನು ಪೃಥ್ವೀದೇವಿಯು ಅರಿಯಳೋ ಎಂಬುದೇ ಮುಂತಾದ ವಾಕ್ಕಿನಲ್ಲಿ ವೇದವು ಯಾವಾತನನ್ನೇ ಜಗತ್ತಿಗೆ ಈಶ್ವರನೆಂದೂ ನಿರ್ಮಲನೆಂದೂ ನಿಯಂತೃವೆಂದೂ ಧ್ಯಾನಮಾಡುವುದಕ್ಕೆ ತಕ್ಕವನೆಂದೂ ಮುನಿಗಳಿಗೂ ದೇವತೆಗಳಿಗೂ ಮನುಷ್ಯರಿಗೂ ಮೋಕ್ಷವನ್ನು ಕೊಡತಕ್ಕವನೆಂದೂ ಹೇಳಿತ್ತಿದೆಯೋ ಆ ಶರಣಹೋಗುವದಕ್ಕೆ ತಕ್ಕವನೂ ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ಮಹೇನ್ದ್ರಾದಿರ್ದೇವೋ ಜಯತಿ ದಿತಿಜಾನ್ಯಸ್ಯ ಬಲತೋ
ನ ಕಸ್ಯ ಸ್ವಾತನ್ತ್ಯ್ರಂ ಕ್ವಚಿದಪಿ ಕೃತೌ ಯತ್ಕೃತಿಮೃತೇ |
ಬಲಾರಾತೇರ್ಗರ್ವಂ ಪರಿಹರತಿ ಯೋಸೌ ವಿಜಯಿನಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||5||

ಮಹೇಂದ್ರನೇ ಮೊದಲಾದ ದೇವತೆಗಳು ಯಾವಾತನ ಬಲದಿಂದಲೇ ದೈತ್ಯರನ್ನು ಗೆಲ್ಲುವರೋ, ಯಾವಾತನ ಪ್ರಯತ್ನವಿಲ್ಲದಿದ್ದರೆ ಮತ್ತೆ ಯಾರಿಗೂ ಪ್ರಯತ್ನಸ್ವಾತಂತ್ರ್ಯವಿಲ್ಲವೋ, ವಿಜಯಿಯಾದ ಇಂದ್ರನ ಗರ್ವವನ್ನು ಯಾವಾತನು ಹೋಗಲಾಡಿಸಿರುವನೋ ಆ ಶರಣುಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ
ಕಣ್ಣುಗಳಿಗೆ ಗೋಚರನಾಗಲಿ!
ವಿನಾ ಯಸ್ಯ ಧ್ಯಾನಂ ವ್ರಜತಿ ಪಶುತಾಂ ಸೂಕರಮುಖಾಂ
ವಿನಾ ಯಸ್ಯ ಜ್ಞಾನಂ ಜನಿಮೃತಿಭಯಂ ಯಾತಿ ಜನತಾ |
ವಿನಾ ಯಸ್ಯ ಸ್ಮೃತ್ಯಾ ಕ್ಷಮಿಶತಜನಿಂ ಯಾತಿ, ಸ ವಿಭುಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||6||
ಯಾವಾತನ ಧ್ಯಾನವಿಲ್ಲದಿದ್ದರೆ ಜನರು ಹಂದಿಯೇ ಮುಂತಾದ ಪಶುಜನ್ಮವನ್ನು ಪಡೆಯುವರೋ, ಯಾವಾತನ ಜ್ಞಾನವಿಲ್ಲದಿದ್ದರೆ ಜನನಮರಣ ಭಯವನ್ನು ಪಡೆಯವರೋ, ಯಾವಾತನ ಸ್ಮೃತಿಯಿಲ್ಲದಿದ್ದರೆ ನೂರಾರು ಬಗೆಯ ಕ್ರಿಮಿಗಳ ಜನ್ಮವನ್ನು ಪಡೆಯುವರೋ ಆ ವಿಭುವೂ ಶರಣು ಹೋಗುವದಕ್ಕೆ ತಕ್ಕವನೂ ಲೋಕಗಳ ಒಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


ನರಾತಙ್ಕೋಟ್ಟಙ್ಕಃ ಶರಣಶರಣೋ ಭ್ರಾನ್ತಿಹರಣೋ
ಘನಶ್ಯಾಮೋ ವಾಮೋ ವ್ರಜಶಿಶುವಯಸ್ಯೋರ್ಜುನಸಖಃ |
ಸ್ವಯಮ್ಭೂರ್ಭೂತಾನಾಂ ಜನಕ ಉಚಿತಾಚಾರಸುಖದಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||7||

ಜನರಿಗೆ ಒದಗುವ ಭಯಗಳನ್ನು ನಾಶಪಡಿಸುವವನೂ ಶರಣಾಗತರನ್ನೂ ರಕ್ಷಿಸುವವನೂ, ಭ್ರಾಂತಿಯನ್ನು ತೊಲಗಿಸುವವನೂ, ಮೇಘದಂತೆ ಕಪ್ಪುಬಣ್ಣದವನೂ, ಸುಂದರನೂ, ಗೋಪಾಲಕರ ಗೆಳೆಯನೂ, ಅರ್ಜುನನ ಸ್ನೇಹಿತನೂ, ತಾನೇ ತೋರಿಕೊಳ್ಳುವನನೂ, ಸಕಲಭೂತಗಳನ್ನು ಸೃಷ್ಟಿಸಿದಾತನೂ, ಯೋಗ್ಯವಾದ ಆಚಾರವುಳ್ಳವರಿಗೆ ಸುಖವನ್ನು ಕೊಡುವಾತನೂ, ಶರಣುಹೋಗುವದಕ್ಕೆ ತಕ್ಕವನೂ, ಲೋಕಗಳೊಡೆಯನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!

ಯದಾ ಧರ್ಮಗ್ಲಾನಿರ್ಭವತಿ ಜಗತಾಂ ಕ್ಷೋಭಕರಣೀ
ತದಾ ಲೋಕಸ್ವಾಮಿ ಪ್ರಕಟಿತವಪುಃ ಸೇತುಧೃಗಜಃ |
ಸತಾಂ ಧಾತಾ ಸ್ವಚ್ಛೋ ನಿಗಮಗುಣಗೀತೋ ವ್ರಜಪತಿಃ
ಶರಣ್ಯೋ ಲೋಕೇಶೋ ಮಮ ಭವತು ಕೃಷ್ಣೋಕ್ಷಿವಿಷಯಃ ||8||

ಯಾವಯಾವಾಗ ಧರ್ಮವು ಕುಂದಿ ಜಗತ್ತಿಗೆಲ್ಲ ಕ್ಷೋಭವನ್ನುಂಟುಮಾಡುವದೋ ಆಗಾಗ ದೇಹವನ್ನು ಪ್ರಕಟಿಗೊಳಿಸಿಕೊಂಡು ಧರ್ಮಸೇತುವನ್ನು ಹಿಡಿದೆತ್ತಿ ಸತ್ಪುರುಷರನ್ನು ಕಾಪಾಡುವವನೂ ಸ್ವಚ್ಛನೂ ಶಾಸ್ತ್ರಗಳ ಸಮುದಾಯದಿಂದ ಕೊಂಡಾಡಲ್ಪಟ್ಟವನೂ ಗೋಕುಲದೊಡೆಯನೂ ಶರಣುಹೋಗುವದಕ್ಕೆ ತಕ್ಕವನೂ ಆದ ಕೃಷ್ಣನು ನನ್ನ ಕಣ್ಣುಗಳಿಗೆ ಗೋಚರನಾಗಲಿ!


Taken from Facebook

ಸೋಮವಾರ, ಸೆಪ್ಟೆಂಬರ್ 10, 2018

ರಾಮರತ್ನಮ್

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ
ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ |
ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ
ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||

 ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು.

ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ
ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ |
ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ
ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||

 ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರಲ್ಲಿ ಸಮರ್ಥನಾದ, ಭೀಮನೂ, ಅಂಜಿಕೆಯುಂಟುಮಾಡುವ ಭಾರಿಯ ನಗೆಯುಳ್ಳವನೂ ಸಕಲಭಯಗಳನ್ನೂ ಪರಿಹರಿಸುವವನೂ ಆದ ಶ್ರೀರಾಮನನ್ನು ಭಜಿಸುವೆನು.

ರಾಮೋ ಮತ್ಕುಲದೈವತಂ ಸಕರುಣಂ ರಾಮಂ ಭಜೇ ಸಾದರಂ
ರಾಮೇಣಾಖಿಲಘೋರಪಾಪನಿಹತೀ ರಾಮಾಯ ತಸ್ಮೈ ನಮಃ |
ರಾಮಾನ್ನಾಸ್ತಿ ಜಗತ್ತ್ರಯೈಕಸುಲಭೋ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಪ್ರೀತಿರತೀವ ಮೇ ಕುಲಗುರೋ ಶ್ರೀರಾಮ ರಕ್ಷಸ್ವ ಮಾಮ್ ||3||

 ರಾಮನು ನನ್ನ ಕುಲದೇವರು. ದಯಾಪೂರ್ಣನಾದ ರಾಮನನ್ನು ಅದರದಿಂದ ಭಜಿಸುವೆನು. ಘೋರವಾದ ಪಾಪಗಳ ನಾಶವೆಲ್ಲವೂ ರಾಮನಿಂದಲೇ ರಾಮನಿಗೆ ನಮಸ್ಕಾರ. ಮೂರು ಲೋಕಗಳಿಗೂ ರಾಮನಷ್ಟು ಸುಲಭನಾದ ಬೇರೊಬ್ಬ ದೇವರಿಲ್ಲ ನಾನು ಶ್ರೀರಾಮನ ಸೇವಕನು ನನಗೆ ರಾಮನಲ್ಲಿಯೇ ಅತಿಯಾದ ಪ್ರೇಮವು ಕುಲಗುರುವಾದ ಶ್ರೀರಾಮನೆ ನನ್ನನ್ನು ಕಾಪಾಡು

ವಂದಾಮಹೇ ಮಹೇಶಾನಚಂಡಕೋದಂಡಖಂಡನಮ್ |
ಜಾನಕೀಹೃದಯಾನಂಚಂದನಂ ರಘುನಂದನಮ್ ||4||

 ಪರಮೇಶ್ವರನ ದುಸ್ಸಹವಾದ ಬಿಲ್ಲನ್ನು ತುಂಡುಮಾಡಿದ, ಜಾನಕೀ ದೇವಿಯ ಹೃದಯಕ್ಕೆ ಆನಂದವುಂಟುಮಾಡುವ ಚಂದನದಂತೆ ಇರುವ, ರಘನಂದನನಾದ ರಾಮನನ್ನು ನಮಸ್ಕರಿಸುತ್ತೇವೆ.

ಜಾನಾತಿ ರಾಮ ತವ ನಾಮರುಚಿಂ ಮಹೇಶಃ
ಜಾನತಿ ಗೌತಮಸತೀ ಚರಣಪ್ರಭಾವಮ್ |
ಜಾನತಿ ದೋರ್ಬಲಪರಾಕ್ರಮಮಿಶಚಾಪಃ
ಜಾನಾತ್ಯಮೋಘಪಟುಬಾಣಗತಿಂ ಪಯೋಧಿಃ ||5||

 ಎಲೈ ರಾಮನೆ, ನಿನ್ನ ನಾಮದ ರುಚಿಯನ್ನು ಪರಮೇಶ್ವರನು ಬಲ್ಲನು. ಗೌತಮನ ಹೆಂಡತಿಯಾದ ಅಹಲ್ಯೆಯು ನಿನ್ನ ಪಾದಗಳ ಮಹಿಮೆಯನ್ನು ಬಲ್ಲಳು. ನಿನ್ನ ಬಾಹುಗಳ ಪರಾಕ್ರಮವನ್ನು ಈಶ್ವರನ ಧನಸ್ಸು ಬಲ್ಲದು ವ್ಯರ್ಥವಾಗದ ತೀಕ್ಷ್ಣವಾದ ನಿನ್ನ ಬಾಣಗಳ ಸಂಚಾರವನ್ನು ಸಮುದ್ರ(ರಾಜನು) ಬಲ್ಲನು.

ಸಕಲಭುವನರತ್ನಂ ಸಚ್ಚಿದಾನಂದರತ್ನಂ
ಸಕಲಹೃದಯರತ್ನಂ ಸೂರ್ಯಬಿಂಬಾಂತರತ್ನಮ್ |
ವಿಮಲಸುಕೃತರತ್ನಂ ವೇದವೇದಾಂತರತ್ನಂ
ಪುರಹರಜಪರತ್ನಂ ಪಾತು ಮಾಂ ರಾಮರತ್ನಮ್ ||6||

 ಎಲ್ಲಾ ಲೋಕಗಳ ರತ್ನವಾದ, ಸಚ್ಚಿದಾನಂದತತ್ತ್ವವಾದ, ಎಲ್ಲರ ಹೃದಯದೊಳಗಿರುವ ಹಾಗೂ ಸೂರ್ಯಬಿಂಬದೊಳಗಿನ ರತ್ನವಾದ, ಪರಿಶುದ್ಧವಾದ ಪುಣ್ಯದ ಸಾರವಾದ, ವೇದವೇದಾಂತಗಳ ತಿರುಳಾದ. ಮಹೇಶ್ವರನು ನಿತ್ಯವೂ ಜಪಿಸುವ ರತ್ನವಾದ ರಾಮನೆಂಬ (ದಿವ್ಯ)ರತ್ನವು ನನ್ನನ್ನು ಕಾಪಾಡಲಿ!

ಸಕಲಸುಕೃತರತ್ನಂ ಸತ್ಯವಾಕ್ಯಾರ್ಥರತ್ನಂ
ಶಮದಮಗುಣರತ್ನಂ ಮುಖ್ಯವೈಕುಂಠರತ್ನಮ್ |
ಪ್ರಣವನಿಲಯರತ್ನಂ ನೀರಜಾಂತಸ್ಥರತ್ನಂ
ಮುನಿಜನಜಪರತ್ನಂ ಪಾತು ಮಾಂ ರಾಮರತ್ನಮ್ ||7||

 ಎಲ್ಲಾ ಪುಣ್ಯಗಳ ಸಾರವಾದ, ಸತ್ಯವಾಕ್ಯದ ಅರ್ಥವೆಂಬ ರತ್ನವಾದ, ಶಮ, ದಮೆ - ಮುಂತಾದ ಗುಣಗಳ ಸಾರವಾದ, ವೈಕುಂಠಲೋಕದ ಮುಖ್ಯವಸ್ತುವಾದ ಓಂಕಾರವೆಂಬ ನಿಲಯದ ರತ್ನವಾದ, (ಹೃದಯವೆಂಬ) ಕಮಲದೊಳಗಿನ ರತ್ನವಾದ, ಮುನಿಜನರು ಜಪಿಸುವ ರತ್ನವಾದ ರಾಮನೆಂಬ ರತ್ನವು ನನ್ನನ್ನು ಕಾಪಾಡಲಿ!

ಕನಕಧಾರಾ ಸ್ತೋತ್ರ - ವಿಶೇಷ - ಹಿನ್ನೆಲೆ

ಕನಕಧಾರಾ ಸ್ತೋತ್ರದ ವಿಶೇಷ - ಹಿನ್ನೆಲೆ

ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ಪೂರ್ಣಗೊಳ್ಳುತ್ತವೆ. ನಮಗೆ ಧನ - ಕನಕ, ಸಿರಿ - ಸಂಪತ್ತು, ಐಶ್ವರ್ಯ, ಯಶಸ್ನು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನು " ಕನಕಧಾರಾ ಸ್ತೋತ್ರ "

 ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ " ಕನಕಧಾರಾ ಸ್ತೋತ್ರ ". ಅದರ ಹಿನ್ನೆಲೆ ಹೀಗೆದೆ.

 ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದ್ದರಿಂದ ಮಧುಕರ ( ಭಿಕ್ಷೆ ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಒಮ್ಮೆ ಕೇರಳದ ಕುಗ್ರಾಮವೋಂದಕ್ಕೆ ಬರುತ್ತಾರೆ. ತಮ್ಮ ಶಿಷ್ಯರೊಡಗೂಡಿ

 ದೈವಭಕ್ತನಾದ ಒಬ್ಬ ಬಡ ಬ್ರಾಹ್ಮಣನ ಮನೆಯ ಮುಂದೆನಿಂತು, "ಭವತಿ ಭಿಕ್ಷಾಂದೇಹಿ " ಎಂದು ಭಿಕ್ಷೇಯನ್ನು ಬೇಡುತ್ತಾರೆ. ಆ ಬ್ರಾಹ್ಮಣನಾದರೋ ಕಡು ಬಡವ. ಮನೆ ಮಂದಿಗೆ ಊಟಕ್ಕಿಲ್ಲದ ಪರಿಸ್ಥಿತಿ. ಮನೆಗೆ ಭಿಕ್ಷೆಗೆ ಬಂದಿರುವವರು ಮಹಾ ಮಹಿಮರಾದ ಶಂಕರಾಚಾರ್ಯರು. ಬ್ರಾಹ್ಮಣ ತನ್ನ ಹೆಂಡತಿಗೆ ಏನಾದರೂ ಭಿಕ್ಷೆ ಇದ್ದರೆ ಯತಿಗಳಿಗೆ ನೀಡಲು ಹೇಳುತ್ತಾನೆ. ಆ ಸಾದ್ವಿಮಣಿಯೂ ಮಹಾ ದೈವ ಭಕ್ತೆ. ಕೊಡಲು ಮನೆಯಲ್ಲಿ ಏನೂ ಇಲ್ಲ. ಮನೆಗೆ ಬಂದ ಅತಿಥಿ ರೂಪದ ದೇವರನ್ನು ಬರಿಗೈಯಲ್ಲಿ ಕಳುಹಿಸುವುದು ಮಹಾಪಾಪವೆಂದರಿತು, ಮನೆಯಲ್ಲಿ ಹುಡುಕಿದಾಗ, ಒಂದು ಜಲಡಿಯಲ್ಲಿ ಇಟ್ಟಿದ್ದ ಒಣಗಿದ ನೆಲ್ಲಿಕಾಯಿಯೊಂದು ದೊರಕುತ್ತದೆ. ಆ ದಿನ ಆ ಒಣ ನೆಲ್ಲಿ ಕಾಯಿಯ ಪಾನಕ ಮಾಡಿ ಮನೆಯವರ ಹಸಿವು ನೀಗಿಸುವುದೆಮದು ಇಟ್ಟಿದ್ದುದು. ಅದನ್ನೇ ಯತಿಗಳಿಗೆ ನೀಡುವುದೆಂದು ನಿರ್ಧರಿಸುತ್ತಾಳೆ.

 ತನ್ನ ಗುಡಿಸಲು ಮುಂದೆ ಭಿಕ್ಷೆಗಾಗಿ ಕಾಯುತ್ತಿರುವ ಶಂಕರರಿಗೆ ನಮಸ್ಕರಿಸಿ, " ಸ್ವಾಮಿ ನಾವು ಕಡುಬಡವರು, ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ನೆಲ್ಲಿಕಾಯಿಯನ್ನೇ ತಮಗೆ ಭಕ್ತಿಯಿಂದ ಅರ್ಪಿಸುತ್ತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು " ಎಂದು ಕಾಲಿಗೆ ಬೀಳುತ್ತಾಳೆ. ಸಾಕ್ಷಾತ್ ಶಿವನ ಅವತಾರವಾಗಿದ್ದ, ಸರ್ವಜ್ಞರಾದ ಶಂಕರರು, ಆ ಬಡ ಹೆಂಗಸಿನ ತ್ಯಾಗ ಬುದ್ಧಿಯನ್ನೂ, ಭಕ್ತಿಯನ್ನೂ ಮನಗಂಡು ಆ ಕುಟುಂಬದ ಬಡತನವನ್ನು ಹೋಗಲಾಡಿಸಬೇಕೆಂದು ಸಂಕಲ್ಪಮಾಡಿ, ಆಕ್ಷಣವೇ ಜಗನ್ಮಾತೆ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವೊಂದನ್ನು ರಚಿಸುತ್ತಾರೆ. ಹಾಗೂ ಮಹಾಲಕ್ಷ್ಮಿಯಲ್ಲಿ ಈ ಬಡ ಕುಟುಂಬವನ್ನು ಉದ್ಧಾರ ಮಾಡಬೇಕೆಂದು ಪ್ರಾರ್ಥಿಸುತ್ತಾರೆ. ಮಹಾಲಕ್ಷ್ಮಿಯ ದಿವ್ಯಾನುಗ್ರಹದಿಂದ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆಯೇ ಆಯಿತು. ಆ ಮಹಾಮಹಿಮ ಸ್ತೋತ್ರವೇ " ಕನದಧಾರ ಸ್ತೋತ್ರ ". ಇದನ್ನು 'ಕನಕವೃಷ್ಟಿಸ್ತೋತ್ರ' ವೆಂದೂ ಕರೆಯುವುದುಂಟು. ಶಂಕರಭಗವತ್ಪಾದರ ಪವಾಡ, ಅನುಗ್ರಹಗಳಿಂದ ಬ್ರಾಹ್ಮಣನ ಕುಟುಂಬದವರೆಲ್ಲರೂ ಆನಂದ ತುಂಬಿರಲಾಗುತ್ತಾರೆ. ಶಂಕರರ ಶಿಷ್ಯವೃಂದ ದಿಗ್ಮೂಢವಾಗುತ್ತದೆ. ಬಡ ದಂಪತಿಗಳ ಕಣ್ಣಲ್ಲಿ ಆನಂದಾಶ್ರುಗಳು ದಾರಾಕಾರವಾಗಿ ಹರಿಯುತ್ತದೆ. ಶಂಕರರ ದಿವ್ಯ ಪಾದಗಳಿಗೆರಗಿ ತಮ್ಮನ್ನು ಉದ್ಧಾರ ಮಾಡಿದ್ದಕ್ಕಾಗಿ ಅನಂತ ಭಗವದ್ಭಕ್ತಿ, ಶ್ರದ್ಧೆ, ಶರಣಾಗತಿ, ಆತ್ಮಸಮರ್ಪಣೆಗಳ ಫಲವೇ ಆಗಿದೆ. ಯಾರು ಸರ್ವಶಕ್ತನಾದ ಪರಮಾತ್ಮನಲ್ಲಿ ಶ್ರವಣ, ಕೀರ್ತನ, ಸ್ಮರಣ, ಪದಸೇವನ, ಅರ್ಚನ, ವಂದನ, ದಾಸ್ಯ, ಸುಖ, ಆತ್ಮನಿವೇದನೆ ಗಳೆಂಬ ನವವಿಧ ಭಕ್ತಿಗಳಿಂದ ಪ್ರಾರ್ಥಿಸುತ್ತಾರೋ ಅವರು ಎಂದೂ ನಾಶವಾಗುವುದಿಲ್ಲ ಎಂದು ಸಾರಿ ತಮ್ಮ ವಿಜಯ ಯಾತ್ರೆಯನ್ನು ಮುಂದುವರೆಸುತ್ತಾರೆ.

 ಆಸ್ತಿಕ ಮಹಾಶರರೂ, ಸದ್ಭಕ್ತರೂ ಈ ಮಹಿಮಾನ್ವಿತ "ಕನಕಧಾರಾ ಸ್ತೋತ್ರ"ವನ್ನು ನಿತ್ಯ ಪಠಿಸಿ ಕೃತಕೃತ್ಯರಾಗಲಿ.

ಅಂಗಂ ಹರೇ ಪುಲಕಭೂಷಣಮಾಶ್ರಯಂತೀ ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾ || 1 ||
ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ - ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಬಿಸಿರುವ, ಮಂಗಳದೇವತೆಯಾದ ( ಮಹಾಲಕ್ಷ್ಮಿಯ ), ಸಮಸ್ತ ಐಶ್ವರ್ಯಗಳನ್ನೂ ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.

ಮುಗ್ಧಾಮುಹುರ್ವಿದಧತೀ ವದನೇ ಮುರಾರೇ |
ಪ್ರೇಮತ್ರಪಾಪ್ರಣೀಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾಃ || 2 ||
ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತಾ ಹಾಗೂ ಹಿಂದೆಗೆಯುತ್ತಾ ಮುಗ್ದವಾದ ರೀತಿಯಿಂದ ಚಲಿಸುತ್ತಿರುವ ಎರಡು ದೊಡ್ಡನೈದಿಲೆಗಳಂತೆ ಇರುವ - ಹಾಗೂ ಹೂಮಾಲೆಯನ್ನು ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮಿಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ

ಅಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದಂ -
ಆನಂದಕಂದಮನಿಮೇಷಮನಂಗತಂತ್ರಮ್ |
ಅಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್
ಭೂತ್ಯೈಭವೇನ್ಮಮ ಭುಜಂಗಶಯಾಂಗನಾಯಾಃ || 3 ||
ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರೆಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ - ವಿಷ್ಣುನನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಬಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ.

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀ ಚ ಹರಿನೀಲಮಣೀ ವಿಭಾತಿ |
ಕಾಮಪ್ರದಾ ಭವತೋಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಲಯಾಯಾಃ || 4 ||
ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದ ಕೌಸ್ತುಭ ರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೋಳೆಯುತ್ತಿದೆಯೋ, ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು ( ಭಕ್ತರಿಗೆ ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವುದೋ - ಅದು ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ.

ಕಾಲಾಂಬುದಾಲಿಲಲಿತೋರಸಿ ಕೈಟಭಾರೇ-
ರ್ಧಾರಾಧರಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿ
ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾಃ || 5 ||
ಕೈಟಭಶತೃವಾದ ( ವಿಷ್ಣುವಿನ ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೋ, ಅದರೋಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವಪುತ್ರಿಯ ದಿವ್ಯರೂಪವು ನನಗೆ ಮಂಗಳವನ್ನುಂಟು ಮಾಡಲಿ.

ಪ್ರಾಪ್ತಂ ಪದಂ ಪ್ತಥಮತಃ ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ
ಮಂದಾಲಸಾಕ್ಷಿ ಮಕರಾಕರಕನ್ಯಕಾಯಾಃ || 6 ||
ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮಧುಸೂದನನಲ್ಲಿ ಸ್ಥಾನವು ಮೊದಲ ಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ ( ಆ ದೇವಿಯ ), ಸಮುದ್ರರಾಜನ ಕನ್ಯೆಯಾದ ಲಕ್ಷ್ಮಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನನ್ನ ಮೇಲೆ ಹರಿಯುವಂತಾಗಲಿ.

ವಿಶ್ವಾಮರೇಂದ್ರಪದವಿಭ್ರಮದಾನದಕ್ಷ ಮಾನಂದಹೇತುರಧಿಕಂ ಮಧವಿದ್ವಿಷೋಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ ಮಿಂದೀವರೋದರಸಹೋದರಮಿಂದಿರಾಯಾಃ || 7 ||
ಸಮಸ್ತದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮಧುಸೂದನನಿಗೂ ಹೆಚ್ಚಿನ ಆನಂದಕಾರಣವಾದ, ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟಾದರೂ ನನ್ನಲ್ಲಿ ನೆಲೆಗೊಳ್ಳಲಿ.

ಇಷ್ಟಾವಿಶಿಷ್ಟಮತಯೋಪಿನರಾಯಯಾ ದ್ರಾಗ್ ದೃಷ್ಟಾಸ್ತ್ರಿವಿಷ್ಟಪದಂ ಸುಲಭಂ ಲಭಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರೀಷ್ಟಾಂ ಪುಷ್ಟಿಂ ಕೃಪೀಷ್ಟಮಮ ಪುಷ್ಕರವಿಷ್ಟರಾಯಾಃ || 8 ||
ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರಿಯರಾದ ಮನಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೇ ಆದರೆ ಸುಲಭವಾಗಿ ಸ್ವರ್ಗಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ, ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯ ನನಗೆ ಪುಷ್ಟಿಯನ್ನುಂಟುಮಾಡಲಿ.

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ ಮಸ್ಮಿನ್ನ ಕಿಂಚನ ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮಘರ್ಮಮಪನೀಯ ಚಿರಾಯ ದೂರಾನ್ನಾರಾಯಣಪ್ರಣಯಿನೀನಯನಾಂಬುವಾಹಃ || 9 ||
ನಾರಾಯಣನ ಪ್ರಿಯೆಯಾದ ದೇವಿಯ ಕಟಾಕ್ಷಪ್ರವಾಹವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ ) ದಯೆಯಿಟ್ಟು ಕೃಪೆಯಿಂದ ಗಾಳಿಯಿಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯ ಧಾರೆಯುನ್ನುಂಟುಮಾಡಲಿ.

ಗೀರ್ದೇವತೇತಿ ಗರುಡಧ್ವಜಸುಂದರೀತಿ ಶಾಕಂಭರೀತಿ ಶಶಿಶೇಖರವಲ್ಲಭೇತಿ |
ಸೃಷ್ಟಿಸ್ಥಿತಿಪ್ರಲಯಕೇಲಿಷು ಸಂಸ್ಥಿತಾಯೈ ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ || 10 ||
ವಾಗ್ಧೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರಿಯಳೆಂದೂ ಶಾಖಂಬರಿಯೆಂದೂ ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾ ಕಾಲಕ್ಕೆ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ, ಮೂರು ಲೋಕಕ್ಕೂ ಗುರುವಾದ ಶ್ರೀ ಮನ್ನಾರಾಯಣನ ಮಡದಿಯಾದ ಅಕೆಗೆ ವಂದನೆಗಳು.

ಶ್ರುತ್ಯೈಸಮೋಸ್ತು ಶುಭಕರ್ಮಫಲಪ್ರಸೂತ್ಯೈ ರತ್ಯೈ ನಮೋಸ್ತು ರಮಣೀಯಗುಣಾಶ್ರಯಾಯೈ |
ಶಕ್ತ್ಯೈ ನಮೋಸ್ತು ಶತಪತ್ರನಿಕೇತನಾಯೈ ಪುಷ್ಪೈ ನಮೋಸ್ತು ಪುರುಷೋತ್ತಮವಲ್ಲಭಾಯೈ || 11 ||
ಶುಭಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಪಿದೇವಿಗೆ ನಮಸ್ಕಾರಗಳು.

ನಮೋಸ್ತು ನಾಲಿಕನಿಭಾನನಾಯೈ ನಮೋಸ್ತು ದಿಗ್ಧೋದಧಿಜನ್ಮಭೂಮ್ಯೈ |
ನಮೋಸ್ತು ಸೋಮಾಮೃತಸೋದರಾಯೈ ನಮೋಸ್ತು ನಾರಾಯಣವಲ್ಲಭಾಯೈ || 12 ||
ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರಮಂಥನ ಕಾಲದಲ್ಲಿಯೇ ( ಲಕ್ಷ್ಮಿಯೊಡನೆ ) ಹುಟ್ಟಿದ ಚಂದ್ರ ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ ನಾರಾಯಣನ ವಲ್ಲಭೆಗೆ ವಂದನೆಗಳು.

ನಮೋಸ್ತು ಹೇಮಾಂಭುಜಪೀಠಕಾಯೈ ನಮೋಸ್ತು ಭೂಮಂಡಲನಾಯಿಕಾಯೈ |
ನಮೋಸ್ತು ದೇವಾದಿದಯಾಪರಾಯೈ ನಮೋಸ್ತು ಶಾರ್ಙ್ಗೌಯುಧವಲ್ಲಭಾಯೈ || 13 ||
ಸುವರ್ಣಕಮಲಪೀಠವಾಸಿನಿಯಾದ, ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿ ಸಮಸ್ತ ಜೀವಿಗಳಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.

ನಮೋಸ್ತು ದೇವ್ಯೈ ಭೃಗುನಂದನಾಯೈ ನಮೋಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋಸ್ತು ಲಕ್ಷ್ಮೈ ಕಮಲಾಲಯಾಯೈ ನಮೋಸ್ತು ದಾಮೋದರವಲ್ಲಭಾಯೈ || 14 ||
ಭೃಗುಪುತ್ರಿಯಾದ ದೇವಿಗೆ, ವಿಷ್ಣವಿನ ಹೃದಯವಾಸಿನಿಯಾದವಳಿಗೆ, ಕಮಲವಾಸಿನಿಯಾದ ಲಕ್ಷ್ಮಿಗೆ, ದಾಮೋದರನ ಪತ್ನಿಯಾದ ಮಹಾದೇವಿಗೆ ವಂದನೆಗಳು.

ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ ನಮೋಸ್ತು ಭೂತ್ಯೈ ಭವನಪ್ರಸೂತ್ಯೈ |
ನಮೋಸ್ತು ದೇವಾದಿಭಿರರ್ಚಿತಾಯೈ ನಮೋಸ್ತು ನಂದಾತ್ಮಜವಲ್ಲಭಾಯೈ || 15 ||
ಕಮಲದಂತೆ ಕಂಗಳುಳ್ಳ ಪ್ರಕಾಶಮಾನಳಾದವಳಿಗೂ, ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳೇ ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರಿಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.

ಸಂಪತ್ಕರಾಣಿ ಸಕಲೇಂದ್ರಿಯ ನಂದನಾನಿ ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ ಮೂಮೇವ ಮಾತರನಿಶಂ ಕಲಯಂತು ಮಾನ್ಯೇ || 16 ||
ಸಂಪತ್ತುಗಳನ್ನು ನೀಡುವ, ಎಲ್ಲಾ ಇಂದ್ರಿಯಗಳಿಗೂ ಆನಂದವನ್ನುಂಟುಮಾಡುವ, ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನೂ ಕಳೆಯುವುದರಲ್ಲಿ ಮುಂದಾಗಿರುವವು. ಎಲೌ ತಯೆ, ಮಾನನೀಯಳೆ, ಆ ವಂದನೆಗಳು ಯಾವಾಗಲೂ ನನಗೆ ಸಂಭವಿಸುತ್ತಿರಲಿ.

ಯತ್ಕಟಾಕ್ಷಸಮುಪಾಸನಾವಿಧಿಃ ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸೈಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ || 17 ||
ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನೂ ಕೊಡುವುದೋ ಅಂಥ, ಮರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ-ಮನಸಾ-ವಾಚಾ ( ತ್ರಿಕರಣಗಳಿಂದಲೂ) ಭಜಿಸುವೆನು.

ಸರಸಿಜನಯನೇ ಸರೋಜಹಸ್ತೇ ಧವಲತಮಾಂಶುಕಗಂಧಮಾಲ್ಯಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ || 18 ||
ಕಮಲದಂತೆ ಕಣ್ಣುಳ್ಳವಳೆ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ, ಹೂಮಾಲೆಗಳಿಂದ ಶೋಭಿಸುತ್ತಿರುವವಳೆ, ಪೂಜ್ಯಳೆ, ಶ್ರೀಹರಿಯ ಪ್ರಿಯಳೆ, ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯಗಳ ಐಶ್ವರ್ಯವನ್ನು ಕೊಡುವವಳೆ, ನನಗೆ ಪ್ರಸನ್ನಳಾಗು.

ದಿಗ್ ಹಸ್ತಿಭಿಃ ಕನಕಕುಂಭಮುಖಾವಸೃಷ್ಟ-
ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ-
ಲೋಕಾಧಿನಾಥಗೃಹಿಣೀಮಮೃತಾಬ್ಧಿಪುತ್ರೀಮ್ || 19 ||
ದಿಗ್ಗಜಗಳ ( ಸೊಂಡಿಲುಗಳಲ್ಲಿರುವ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೇ ತಾಯಿಯೂ, ಸಮಸ್ತ ಲೋಕಗಳ ಒಡೆಯನಾದ ( ವಿಷ್ಣುವಿನ ) ಪತ್ನಿಯೂ, ಅಮೃತಸಮುದ್ರರಜನ ಮಗಳೂ ಆದ ದೇವಿಯನ್ನು ನಾನು ಪ್ರಾತಃಕಾಲದಲ್ಲಿ ವಂದಿಸುವೆನು.

ಕಮಲೇ ಕಮಲಾಕ್ಷವಲ್ಲಭೇ ತ್ವಂ ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ || 20 ||
ಎಲೌ ಕಮಲಾದೇವಿಯ, ಕಮಲನಯನನಾದ ವಿಷ್ಣುವಿನ ಪ್ರಿಯಳೆ, ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಡಗಳಿಂದ ನನ್ನನ್ನು ನೋಡುವವಳಾಗು. ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ ತ್ರಯೀಮಯೀಂ ತ್ರಿಭುವನಮಾತರಂ ರಮಾಮ್ |
ಗುಣಾಧಿಕಾ ಗುರುತರಭಾಗ್ಯಭಾಜಿನೋ ಭವಂತಿ ತೇ ಭುವಿ ಬುಧಭಾವಿತಾಶಯಾಃ || 21 ||
ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.
|| ಇತಿ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||