ಶನಿವಾರ, ಜನವರಿ 14, 2017

ವೇದಗಳೂ ಪುರಾಣಗಳೂ ಷಡ್ದರ್ಶನ ಸಹಾಯದಿಂದ ಏಕತ್ವವನ್ನು ಹೊಂದಬೇಕೆ ಹೊರತು ಮತಾಂಧತೆಯಿಂದ ವೈಷಮ್ಯಪೂರಿತ ಉದ್ದೇಶದಿಂದ  ತತ್ತ್ವಗಳನ್ನು ಅಪಾರ್ಥಮಾಡಿಕೊಂಡು ಜನರಲ್ಲೂ ದೇವತೆಗಳಲ್ಲೂ ತಾರತಮ್ಯಮಾಡುತ್ತಿರುವ ಇಂದಿನ ಸನ್ನಿವೇಶವನ್ನು ಉದ್ದೇಶಿಸಿ ಈ ತತ್ತ್ವವನ್ನು ನಿರೂಪಿಸಿದ್ದೇನೆ.ಆಚಾರ್ಯತ್ರಯರ ಉದ್ದೇಶವೂ ಅದೇ ಆಗಿರುತ್ತದೆ. ಆದರೆ ಕೇವಲ ಪಾಂಡಿತ್ಯದಿಂದ ಕುತರ್ಕಗಳಿಂದ ದುಃಶಾಸ್ತ್ರಗಳನ್ನು ಸೃಷ್ಟಿಸಿ ಅದರ ಆಧಾರಮೇಲೆ ಕುಯುಕ್ತಿಗಳನ್ನು ಸಂಯೋಜಿಸಿ ಹಗರಣ ಮಾಡುತ್ತಿರುವರ ಮತಾಂಧತೆಯನ್ನು ಖಂಡಿಸುವುದೂ ಈ ನಿರೂಪಣೆಯ ಉದ್ದೇಶವಲ್ಲ. ನಶಿಸಿ ಹೋಗುತ್ತಿದ್ದ ವೈದಿಕ ಪರಂಪರೆಯನ್ನು ಉದ್ಧಾರಮಾಡಲೆಂದೇ ಆಚಾರ್ಯತ್ರಯರ ಅವತಾರ ಎಂಬುದು ಸಾರ್ವಕಾಲಿಕ ಸತ್ಯ ವೇದಗಳು ಆ ಸರ್ವಶಕ್ತನ ಸಾಮರ್ಥ್ಯದ ನಾನಾರೂಪಗಳನ್ನು ಕೊಂಡಾಡಿದರೆ ಪುರಾಣಳು ಆಯಾರೂಪಗಳ ಸಾಮರ್ಥ್ಯವನ್ನು ಪಾತ್ರದಮೂಲಕ ತಿಳಿಯಪಡಿಸುತ್ತದೆ. ಆದರೇ ಎಲ್ಲದಕ್ಕೂ ಆ ಸರ್ವಶಕ್ತನಾದವನೇ ಬ್ರಹ್ಮ , ವಿಷ್ಣು ಮಹೇಶ್ವರ ಎಂಬುದಾಗಿ  ತೋರಿಕೊಳ್ಳುತ್ತಾನೆ.ಒಂದು ರೂಪಾಯಿಯ ನಾಣ್ಯದಲ್ಲಿ ಹೇಗೆ  ನೂರು ಪೈಸೆಗಳು , ನಾಲ್ಕಾಣೆ ,ಎಂಟಾಣೆ, ಹನ್ನೆರಡಾಣೆ ಎಂಬುದಾಗಿ ಕಲ್ಪಿತವಾಗಿದೆಯೋ  ಹಾಗೆಯೇ ಪೈಸೆ, ಆಣೆಯಂತೆ ಏಕಮೇವಾದ್ವಿತೀಯನಾದ  ಪುರುಷೋತ್ತಮನು  ವೈವಿಧ್ಯಮಯನಾಗಿಯೂ ನಾನಾರೂಪಿಯಾಗಿಯೂ ಕಂಡುಕೊಳ್ಳುತ್ತಾನೆ. ಈ ನಾನಾರೂಪವನ್ನು ಏಕವಾಗಿ ಕಂಡುಕೊಳ್ಳುವುದೇ ಜೀವನದ ಗುರಿ.ಅದನ್ನೇ ಆಚಾರ್ಯತ್ರಯರು ಮೋಕ್ಷ , ಹರಿಸಾಯುಜ್ಯ ಎಂದು ಮುಂತಾಗಿ ಹೇಳಿರುತ್ತಾರೆ.
ಇಂದಿಗೆ ಪುರಾಣಗಳಲ್ಲಿಯೂ ಅದರಲ್ಲಿರುವ ತತ್ತ್ವಗಳನ್ನು ವೇದದ ತತ್ತ್ವವನ್ನೂ ಕೇವಲ ಕುತರ್ಕ ಮತ್ತು ಪಾಂಡಿತ್ಯದಿಂದ ತಿದ್ದಿ , ವೈಷಮ್ಯಸೂಸುವಂಥ ಅರ್ಥಗಳನ್ನು ಕಲ್ಪಿಸಿ ಭಕ್ತವೃಂದವನ್ನೂ ಸಾಮಾನ್ಯ ಜನರನ್ನೂ ಅಡ್ಡದಾರಿಗೆಳೆಯುತ್ತಿರುವ ಈ ದುರಾಚಾರಿಗಳ ಸ್ವಾರ್ಥವನ್ನು ನಾವು ಕಂಡುಕೊಳ್ಳಬೇಕು.ಶಿವನೇ ಹರಿಯು ಹರಿಯೇ ಶಿವನು ಅವನೇ ಪರಬ್ರಹ್ಮನು ಎಂಬುವುದನ್ನೇ ವೇದಪುರಾಣಗಳು ಸಾರುತ್ತಿರುವುದು  ಎಂಬ ಅರಿವು ಕೇವಲ ಸಂಸ್ಕಾರದಿಂದ ದೊರಕುವುದೇ ಹೊರತು ಪಾಂಡಿತ್ಯದಿಂದ, ಕುತರ್ಕಗಳಿಂದ ದುಃಶಾಸ್ತ್ರಗಳನು ಅಧ್ಯಯನ ಮಾಡುವ ನೆಪದಲ್ಲಿ ದೊರೆಯುವುದಲ್ಲ. ಎಲ್ಲರಿಗೂ ಅವರವರ ಆಚಾರ್ಯರು ಹಾಕಿಕೊಟ್ಟ ದಾರಿಯೇ ಅತ್ಯಂತ ಶ್ರೇಷ್ಠವಾದದ್ದು.ಅದನ್ನು ಶ್ರೇಷ್ಠವೆಂದು ತಿಳಿದುಕೊಂಡು ಸರ್ವೋತ್ತಮನಾದವನ ಸಾಯುಜ್ಯವನ್ನು ಕಂಡುಕೊಳ್ಳಬೇಕು. ಇನ್ನೊಂದು ಮತವನ್ನು ದೂಷಿಸುವುದರಿಂದ ಏಳ್ಗೆಯನ್ನು ಸಾಧಿಸಬಹುದು ಎಂಬುವ ಮಾತು ಅನರ್ಥಕ್ಕೆ ದಾರಿಮಾಡಿಕೊಡುತ್ತದೆ. ಹಿಂದೆ ತಿಳಿಗೇಡಿಗಳು ಬಿತ್ತಿದ ವಿಷಬೀಜವನುಂಡು ಆಚಾರ್ಯರನ್ನು ನಿಂದಿಸುವ ಪರಂಪರೆ ಇಲ್ಲಿಗೆ ನಿಲ್ಲಬೇಕು. ಆಚಾರ್ಯತ್ರಯರು ಇಂಥ ತಿಳಿಗೇಡಿಗಳಿಗೆ ಸದ್ಬುದ್ಧಿಯನ್ನು ದಯಪಾಲಿಸುವ ಮೂಲಕ ಸದಾಚಾರವನ್ನು ಅವರ ಮನದಲ್ಲಿ ಸ್ಥಾಪಿಸಲಿ ಎಂಬ ಮಹದಾಶಯ. ಅಲ್ಲಿಗೆ ಜೀವನದ ಸಾರ್ಥಕ್ಯವು.
 
ಪುರಾಣಾಧಾರಿತ ಹರಿ ಹರ ಅಭೇದ
ಕೂರ್ಮ ಪುರಾಣ :-

ನ ಮೇ ನಾರಾಯಣಾದ್ಭೇದೋ ವಿದ್ಯತೇ ಹಿ ವಿಚಾರತಃ  |
ತನ್ಮಯಾಹಂ ಪರಂ ಬ್ರಹ್ಮ ಸ ವಿಷ್ಣುಃ ಪರಮೇಶ್ವರಃ  || ೧,೧.೫೮ ||
ಯೇ ತ್ವಿಮಂ ವಿಷ್ಣುಮವ್ಯಕ್ತಂ ಮಾಂ ವಾ ದೇವಂ ಮಹೇಶ್ವರಮ್  |
ಏಕೀಭಾವೇನ ಪಶ್ಯನ್ತಿ ನ ತೇಷಾಂ ಪುನರುದ್ಭವಃ  || ೨,೧೧.೧೧೪ ||
ಯೇಽನ್ಯಥಾ ಮಾಂ ಪ್ರಪಶ್ಯನ್ತಿ ಮತ್ವೇಮಂ ದೇವತಾನ್ತರಮ್  |
ತೇ ಯಾನ್ತಿ ನರಕಾನ್ ಘೋರಾನ್ನಾಹಂ ತೇಷುವ್ಯವಸ್ಥಿತಃ  || ೨,೧೧.೧೧೬ ||
ಯೇ ತ್ವಿಮಂ ವಿಷ್ಣುಮವ್ಯಕ್ತಂ ಮಾಂ ವಾ ದೇವಂ ಮಹೇಶ್ವರಮ್  |
ಏಕೀಭಾವೇನ ಪಶ್ಯನ್ತಿ ನ ತೇಷಾಂ ಪುನರುದ್ಭವಃ  || ೨,೧೧.೧೧೪ ||

ನಾರದೀಯ ಪುರಾಣ

ಹರಿರೂಪಧರಂ ಲಿಙ್ಗಂ ಲಿಙ್ಗರೂಪಧರೋ ಹರಿಃ  |
ಈಷದಪ್ಯನ್ತರಂ ನಾಸ್ತಿ ಭೇದಕೃಚ್ಚಾನಯೋಃ ಕುಧೀಃ  || ೧,೬.೪೪ ||
ಅನಾದಿನಿಧನೇ ದೇವೇ ಹರಿಶಙ್ಕರಸಂಜ್ಞಿತೇ  |
ಅಜ್ಞಾನಸಾಗರೇ ಮಗ್ನಾ ಭೇದಂ ಕುರ್ವನ್ತಿ ಪಾಪಿನಃ  || ೧,೬.೪೫ ||
ಹರಿಶಙ್ಕರಯೋರ್ಮಧ್ಯೇ ಬ್ರಹ್ಮಣಶ್ಚಾಪಿ ಯೋ ನರಃ  |
ಭೇದಂ ಕರೋತಿ ಸೋಽಭ್ಯೇತಿ ನರಕಂ ಭೃಶದಾರುಣಮ್  || ೧,೬.೪೮ ||
ಹರಂ ಹರಿಂ ವಿಧಾತಾರಂ ಯಃ ಪಶ್ಯತ್ಯೇಕರೂಪಿಣಮ್  |
ಸ ಯಾತಿ ಪರಂಮಾನನ್ದಂ ಶಾಸ್ತ್ರಾಣಾಮೇಷ ವಿಷ್ವಯಃ  || ೧,೬.೪೯ ||
ಹರಿಭಕ್ತಿಪರೋ ಯತ್ರ ತತ್ರ ಬ್ರಹ್ಮಾ ಹರಿಃ ಶಿವಃ  |
ದೇವಾಃ ಸಿದ್ಧಾ ಮುನೀಶ್ವಾಶ್ಚ ನಿತ್ಯಂ ತಿಷ್ಟನ್ತಿ ಸತ್ತಮಾಃ  || ೧,೧೧.೪ ||
ಹರಿರೂಪೀ ಮಹಾದೇವಃ ಶಿವರೂಪೀ ಜನಾರ್ದನಃ  |
ಇತಿ ಲೋಕಸ್ಯ ನೇತಾ ಯಸ್ತಂ ನಮಾಮಿ ಜಗದ್ಗುರುಮ್  || ೧,೧೧.೩೦ ||
ಶಿವ ಏವ ಹರಿಃ ಸಾಕ್ಷಾದ್ಧರಿರೇವ ಶಿವಃ ಸ್ವಯಮ್  |
ದ್ವಯೋರನ್ತರದೃಗ್ಯಾತಿ ನರಕಾರನ್ಕೋಟಿಶಃ ಖಲಃ  || ೧,೧೫.೧೫೮ ||
ತಸ್ಮಾದ್ವಿಷ್ಣುಂ ಶಿವಂ ವಾಪಿ ಸಮಂ ಬುದ್ಧಾ ಸಮರ್ಚಯ  |
ಭೇದಕೃದ್ದುಃಖಮಾಪ್ನೋತಿ ಇಹ ಲೋಕೇ ಪರತ್ರಘ ಚ  || ೧,೧೫.೧೫೯ ||

ಹರಿವಂಶ :-
ಯೋವಿಷ್ಣುಃ ಸತುವೈ ರುದ್ರೋ ಯೊ ರುದ್ರಃ ಸ ಪಿತಾಮಹಃ | ಏಕಮೂರ್ತಿಸ್ತ್ರಯೋ ದೇವಾ ರುದ್ರವಿಷ್ಣುಪಿತಾಮಹಃ ||
ಮಹಾಭಾರತ :-
ರುದ್ರೋ ನಾರಾಯಣಶ್ಚೈವೇತ್ಯೇಕಂ ಸತ್ತ್ವಂ  ದ್ವಿಧಾಕೃತಮ್ ||

ತ್ವಂ ಯಜ್ಞಸ್ತ್ವಂ ವಿಷ್ಣುಸ್ತ್ವಂ ರುದ್ರಸ್ತ್ವಂ ಪ್ರಜಾಪತಿ :

ಹರಿ ಓಮ್ ತತ್ ಸತ್...
courtesy — Kanva Yuva Vedike.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ