ಬುಧವಾರ, ಜನವರಿ 25, 2017

🕉 *॥ ಸುಜ್ಞಾನ ಸ್ತೋತ್ರ ಮಂಜರಿ ॥* 🕉
   
*ಆಂಜನೇಯ ಸ್ತೋತ್ರಗಳು*

|| ಶ್ರೀಮದಾಂಜನೇಯ ಸ್ತೋತ್ರಮ್ ||
**************************
ಅಸ್ಯ ಶ್ರೀಮದ್ದಾಂಜನೇಯ ಸ್ತೋತ್ರ ಮಹಾಮಂತ್ರಸ್ಯ|
ಶ್ರೀ ರಾಮಚಂದ್ರ ಋಷಿ:| ವೀರಹನುಮಾನ್ ದೇವತಾ |
ಅನುಷ್ಟಪ್ ಛಂದ: |ಶ್ರೀರಾಮದೂತ ಪ್ರೀತ್ಯರ್ಥೇ ಜಪೇ ವಿನಿಯೋಗ:: ||

ಭಾವಾರ್ಥ:-ಶ್ರೀಮತ್ ಆಂಜನೇಯ ಸ್ತೋತ್ರಗಳಿಗೆ ಶ್ರೀ ರಾಮಚಂದ್ರನು ಋಷಿ; ವೀರ ಹನುಮನು ದೇವತೆ; ಇದು ಅನುಷ್ಟುಪ್ ಛಂದಸ್ಸಿನಲ್ಲಿದೆ. ಇದನ್ನು ಶ್ರೀರಾಮಚಂದ್ರನ ಪ್ರೀತಿಯ ನ್ನು ಪಡೆಯುವ ಸಲುವಾಗಿ ಉಪಯೋಗಿಸುವುದಾಗಿದೆ.

ಹನುಮಾನಂಜನಾಸೂನು: ವಾಯುಪುತ್ರೋ ಮಹಾಬಲ:|
ರಾಮೇಷ್ಟ: ಫಲ್ಗುಣಸಖ: ಪಿಂಗಾಕ್ಷೋಸ್ಮಿತವಿಕ್ರಮ: ||೧||

ಭಾವಾರ್ಥ:- ಹನುಮ. ಅಂಜನಾಸೂನು, ವಾಯುಪುತ್ರ, ಮಹಾಬಲ, ರಾಮೇಷ್ಟ,[ರಾಮನಿಗೆ ಇಷ್ಟನಾದವನು],ಪಲ್ಗುಣಸಖ[ ಅರ್ಜುನನಮಿತ್ರ], ಪಿಂಗಾಕ್ಷ[ರುದ್ರ], ಅಮಿತವಿಕ್ರಮ[ಮಹಾಶೂರ]------

ಉದದಿಕ್ರಮಣಶ್ಚೈವ ಸೀತಾಶೋಕವಿನಾಶನ: |
ಲಕ್ಷ್ಮಣ ಪ್ರಾಣದಾತಾ ಚ ದಶಗ್ರೀವಸ್ಯ ದರ್ಪಹಾ ||೨||

ಭಾವಾರ್ಥ:-ಉದದಿಕ್ರಮಣ[ಸಾಗರವನ್ನು ದಾಟಿದವ],ಸೀತಾಶೋಕ ವಿನಾಶನ, ಲಕ್ಷ್ಮಣಪ್ರಾಣದಾತ, ದಶಗ್ರೀವದರ್ಪಹರ[ದಶಕಂಠನ ದರ್ಪವನ್ನು ನಾಶಗೊಳಿಸಿದವ]---------

ಏವಂ ದಶನಾಮಾನಿ ಕಪೀಂದ್ರಸ್ಯ ಮಹಾತ್ಮನ: |
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಕಾಲೇ ವಿಶೇಷತ: ||೩||
ತಸ್ಯ ಮೃತ್ಯು ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ |

ಭಾವಾರ್ಥ:-ಈ ರೀತಿಯಾಗಿ ಹತ್ತು ಹೆಸರುಗಳು ಮಹಾತ್ಮನಾಗಿರುವ ಕಪೀಶ್ವರನಿಗೆ ಇವೆ.ಇವುಗಳನ್ನು ಯಾವಾತನು ಪ್ರತಿದಿವಸ ನಿದ್ರಿಸುವ ಸಮಯದಲ್ಲಿ ;ವಿಶೇಷವಾಗಿ ಪ್ರವಾಸ ಕಾಲದಲ್ಲಿ ಪಠಿಸುವನೋ ಆತನಿಗೆ ಮೃತ್ಯುವಿನ ಭಯವಿರುವುದಿಲ್ಲ ಮಾತ್ರವಲ್ಲದೆ ಆತನಿಗೆ ಎಲ್ಲೆಡೆಯೂ ವಿಜಯ ಲಭಿಸುತ್ತದೆ.

ಸ್ಪಾಟಿಕಾಭಂ ಸ್ವರ್ಣಕಾಂತಿಂ ದ್ವಿಭುಜಂ ಚ ಕೃತಾಂಜಲಿ |
ಕುಂದಲದ್ವಯ ಸಂಶೋಭಿಮುಖಾಂಭೋಜಂ ಹರಿಂ ಭಜೇತ್ ||೪||

ಭಾವಾರ್ಥ:-ಕರ್ಪೂರದ ಕಾಂತಿ ಹಾಗೂ ಬಂಗಾರದ ಹೊಳಪಿನಿಂದ ಕೂಡಿ ಭಕ್ತಿ ವಿನಯಗಳಿಂದ  ನಮಸ್ಕರಿಸುತ್ತಿರುವ; ಎರಡು ತಾವರೆ ಪುಷ್ಪಗಳನ್ನು ಕೈಯಲ್ಲಿ ಹಿಡಿದವನಾಗಿ ಶೋಭಾಯಮಾನನಾಗಿದ್ದು ಶ್ರೀ ಹರಿಯನ್ನು ಆಂಜನೇಯನು ಪೂಜಿಸುತ್ತಿರುವನು.

ಆಂಜನೇಯಮತಿಪಾಟಲಾನನಂ ಕಾಂಚನಾದ್ರಿ ಕಮನೀಯ ವಿಗ್ರಹಂ |
ಪಾರಿಜಾತ ತರುಮೂಲವಾಸಿನಂ ಭಾವಯಾಮಿ ಪವಮಾನ ನಂದನಂ ||೫||

ಭಾವಾರ್ಥ:-ಆಂಜನೇಯ ನಸುಗೆಂಪು ಮೊಗದವನೂ; ಸುಮೇರು ಪರ್ವತದ ರಮಣೀಯವಾದ ವಿಗ್ರಹ ರೂಪನೂ; ಪಾರಿಜಾತ ಗಿಡದ ಬುಡದಲ್ಲಿ ವಾಸಿಸುವವನೂ;ಆಗಿದ್ದು ಅಂತಹಾ ವಾಯುಪುತ್ರನನ್ನು ಸ್ಮರಿಸುವೆನು.

ಯತ್ರ ಯತ್ರ ರಘುನಾಥಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಂ |
ಬಾಷ್ಪವಾರಿಪರಿ ಪೂರ್ಣಲೋಚನಂ ಮಾರುತಿಂ ನಮತ ರಾಕ್ಷಸಾಂತಕಂ ||೬||

ಭಾವಾರ್ಥ:- ಎಲ್ಲೆಲ್ಲಿ ಶ್ರೀರಾಮನ ಸಂಕೀರ್ತನೆ ಕೇಳಿಸಲ್ಪಡುತ್ತಿದೆಯೋ ಅಲ್ಲಲ್ಲಿ ಶಿರವಾಗಿ ಕೈಮುಗಿದುಕೋಂಡು ಕಣ್ತುಂಬಾ ಆನಂದ ಭಾಷ್ಪವನ್ನು ಸುರಿಸುತ್ತಾ ರಾಕ್ಷಸಾಂತಕನಾದ ಹನುಮನು ನಮಿಸುತ್ತಾ ಇರುವನು.

ವಿಜಯಂ ಲಭತೇ ಸತ್ಯಂ ಪರಂಸೌಖ್ಯಮಾಪ್ನುಯಾತ್ |
ಭೂತಪ್ರೇತ ಪಿಶಾಚಾಶ್ಚ ಬ್ರಹ್ಮರಾಕ್ಷಸದರ್ಶನೇ ||೭||

ಭಾವಾರ್ಥ:-ಈ ಸ್ತೋತ್ರಗಳನ್ನು ಪಠಿಸುವುದರಿಂದ ಸತ್ಯವಾಗಿಯೂ ವಿಜಯ ಲಭಿಸುತ್ತದೆ.ಮತ್ತು ಪರಲೋಕದಲ್ಲಿ ಸುಖವು ಲಭಿಸುತ್ತದೆ.ಭೂತ ಪ್ರೇತ ಪಿಶಾಚಾದಿಗಳಿಂದಲೂ ಬ್ರಹ್ಮ ರಾಕ್ಷಸ ದರ್ಶನ ಕಾಲದಲ್ಲಿ;--------

ಸಿಂಹವ್ಯಾಘ್ರ ಭಯಪ್ರಾಪ್ತೇ ಶತ್ರು ಶಸ್ತ್ರಾಸ್ತ್ರಪಂಜರೇ |
ದು:ಖೇ ಮಹಾರಣೇ ಚೈವ ಪಿಶಾಚಗ್ರಹ ಪಾತಕೇ ||೮||

ಭಾವಾರ್ಥ:-ಸಿಂಹ,ವ್ಯಾಘ್ರಾದಿ ಕ್ರೂರ ಮೃಗಗಳಿಂದ, ಶತ್ರುಗಳಿಂದ, ಶಸ್ತ್ರಾಸ್ತ್ರಗಳಿಂದ ಅಪಾಯದ ಸಂಭವವಿರುವ ಕಾಲದಲ್ಲಿ, ಸೆರೆಮನೆ ವಾಸದ ಭೀತಿಗೊಳಗಾಗಿರುವಾಗ,ದು:ಖದ ಸಮಯದಲ್ಲಿ; ಯುದ್ಧಭೂಮಿಯಲ್ಲಿ, ಗ್ರಹದೋಷಗಳಲ್ಲಿ,--------

ಶತವಾರಂ ಪಠೇನ್ನಿತ್ಯಂ ಮಂಡಲಂ ಭಕ್ತಿತತ್ಪರ:
ಸರ್ವ ಸೌಖ್ಯಮವಾಪ್ನೋತಿ ತ್ರಿಸಂಧ್ಯಂ ರಾಮಪೋಷಿತ: ||೯||

ಭಾವಾರ್ಥ:-ಶ್ರದ್ಧಾ ಭಕ್ತಿ ಪುರಸ್ಸರನಾಗಿ ನೂರು ಬಾರಿ ಪ್ರತಿನಿತ್ಯವೂ ಮೂರು ಹೊತ್ತೂ ಒಂದು ಮಂಡಲ ಕಾಲ[ನಲುವತ್ತೆಂಟು ದಿವಸಗಳ ಕಾಲ] ಪಠಿಸಿದಲ್ಲಿ ಸಮಸ್ತ ಸುಖಗಳೂ  ಲಭಿಸಿ ಶ್ರೀರಾಮನಿಂದ ರಕ್ಷಿಸಲ್ಪಡುತ್ತಾನೆ.

ಅಪರಾಜಿತ ಪಿಂಗಾಕ್ಷ ನಮಸ್ತೇ ರಾಮಪೂಜಿತ |
ಪ್ರಸ್ಥಾನಂ ಚ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||೧೦||

ಭಾವಾರ್ಥ:-.ಸೋಲಿಸಲಸಾಧ್ಯವಾಗಿರುವವನೂ; ಹಳದಿ ಕಣ್ಣುಗಳನ್ನು ಹೊಂದಿರುವವನೂ;ನಮಸ್ಕರಿಸುತ್ತಾ;.ರಾಮನನ್ನು ಪೂಜಿಸುತ್ತಾ, ಸದಾ ಸಂಚರಿಸುತ್ತಾ, ಶುಭ ಫಲವನ್ನು ಕರುಣಿಸುತ್ತಿರುವವನು

ಆಯು:ಪ್ರಜ್ಞಾ ಯಶೋಲಕ್ಷ್ಮೀ ಶ್ರದ್ಧಾಪುತ್ರಾ: ಸುಶೀಲತಾ |
ಆರೋಗ್ಯಂ ದೇಹಸೌಖ್ಯಂ ಚ ಕಪಿನಾಥ ನಮೋಸ್ತು ತೇ ||೧೧||

ಭಾವಾರ್ಥ:-.ಆಯುಷ್ಯವನ್ನೂ, ಪ್ರಜ್ಞೆಯನ್ನೂ, ಯಶಸ್ಸನ್ನೂ,ಸಂಪದವನ್ನೂ, ಆರೋಗ್ಯವನ್ನೂ, ಶರೀರ ಸೌಖ್ಯವನ್ನೂ, ಕರುಣಿಸುತ್ತಿರುವ ಕಪಿಕುಲದೊಡೆಯನಿಗೆ ನಮಸ್ಕರಿಸುವೆ

ದೀನೇಮಯಿ ದಯಾಂ ಕೃತ್ವಾ ಮಮ ದು:ಖಂ ವಿನಾಶಯ |
ಐಶ್ವರ್ಯಂ ಪುತ್ರಲಾಭಂ ಚ ಲಕ್ಷ್ಮೀಂ ದೇಹಿ ಸದಾಪ್ರಭೋ ||೧೨||

ಭಾವಾರ್ಥ:-.ಸಂಕಷ್ಟದಲ್ಲಿರುವ ನನಗೆ ದಯೇತೋರಿ ನನ್ನ ದು:ಖಗಳನ್ನು ನಾಶಗೊಳಿಸಿ ನನಗೆ ಸಂಪದೈಶ್ವರ್ಯ, ಪುತ್ರಸಂತಾನವನ್ನು ಕರುಣಿಸು ಸ್ವಾಮಿಯೇ.

ತ್ವತ್ಪಾದಪಂಕಜದ್ವಂದ್ವಂ ವಿನಾ ನಾನ್ಯಂ ಭಜಾಮ್ಯಹಂ |
ನ್ಯೂನಾರಿಕ್ತಂ ಯತ್ಕಿಂಚಿತ್ತ್ಸರ್ವಂ ಕ್ಷಂತು ಮಹರ್ಸಿ ||೧೩||

ಭಾವಾರ್ಥ:-.ನಿನ್ನ ಚರಣಾರವಿಂದದ್ವಯಗಳ ಹೊರತಾಗಿ ಅನ್ಯ ನಾನು ಭಜಿಸುವುದಿಲ್ಲ. ನನ್ನ ಈ ಕಾರ್ಯದಲ್ಲಿ ಏನಾದರೂ ನ್ಯೂನತೆಗಳು,ಅತಿಶಯಗಳು,ಇತ್ಯಾದಿ ಹೆಚ್ಚು ಕಡಿಮೆಯಾಗಿದ್ದಲ್ಲಿ ಅವೆಲ್ಲವನ್ನೂ ಸದಾ ಮನ್ನಿಸು ಪ್ರಭುವೇ

ಮಾತಾ ತ್ವಂ ಚ ಪಿತಾ ತ್ವಂಚ ಭ್ರಾತಾ ತ್ವಂ ಚ ಪ್ರಭುರ್ಮಮ |
ತ್ವಮೇವ ಶರಣಂ ಪ್ರಾಪ್ತಂ ರಕ್ಷ ಮಾಂ ಕರುಣಾನಿದೇ ||೧೪||

ಭಾವಾರ್ಥ:- ನೀನೇ ನನ್ನ ತಾಯಿ;ತಂದೆ, ಸಹೋದರ,ನನ್ನ ಒಡೆಯ. ನಿನ್ನಲ್ಲಿ ನಾನು ಶರಣಾಗುವೆ. ನನ್ನನ್ನು ರಕ್ಷಿಸು ಕರುಣಾನಿಧಿಯೇ

ನಾನಾ ವಿಘ್ನಾಂಶ್ಚ ರೋಗಾಂಶ್ಚ ನಾಶಯ ತ್ವಂ ಸದಾ ಮಮ |
ತ್ರಿ ಲಕ್ಷಂ ಹನುಮನ್ನಾಮಯೋ ಜಪೇದ್ಭಕ್ತಿ ತತ್ಪರ: ||೧೫||

ಭಾವಾರ್ಥ:- ನನ್ನ ನಾನಾ ವಿಧದ ಅಡ್ಡಿ‌ಆತಂಕಗಳನ್ನು; ರೋಗ ಭಾಧೆಗಳನ್ನು,ಸದಾ ನಾಶಗೊಳಿಸು ಸ್ವಾಮಿಯೇ. ಯಾವಾತನು ಮೂರು ಲಕ್ಷಸಂಖ್ಯೆ ಹನುಮ ನಾಮಗಳನ್ನು ಭಕ್ತಿಯುತನಾಗಿ ಜಪಿಸುವನೋ ಅವನಿಗೆ------

ರಾಜದ್ವಾರೇ ಮಹಾಘೋರೇ ಭಯಂ ನೈವಾರಿಸಂಕಟೇ |
ಬ್ರಹ್ಮರಾಕ್ಷಸಂ ಭೂತಾನಾಂ ಭಯಲೇಶೋ ನ ವಿದ್ಯತೇ |೧೬||

ಭಾವಾರ್ಥ:-ಅರಮನೆಯ ಮೂಲಕವಾಗಿ ಬರಬಹುದಾದ, ಮಹಾಘೋರ ಭೀತಿಯನ್ನು, ಶತ್ರುಗಳ ಕಾಟಗಳನ್ನು, ಬ್ರಹ್ಮರಾಕ್ಷಸ, ಭೂತಾದಿಗಳ ಭೀತಿಯನ್ನು  ಕಿಂಚಿತ್ತೂ ಇಲ್ಲದಂತೆ ಕಾಪಾಡುತ್ತಿರು ಸ್ವಾಮಿಯೇ.
*********************************************************************************
|| ಇತಿ ಶ್ರೀಮದಾಂಜನೇಯ ಸ್ತೋತ್ರಮ್ ||   || ಈ ರೀತಿಯಾಗಿ ಶ್ರೀಮದಾಂಜನೇಯ ಸ್ತೋತ್ರಗಳ ಭಾವಾರ್ಥವು ||

Courtesy: Whatsup

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ